ಪ್ರೇಮ ವೈಫಲ್ಯ: ಯುವತಿ ಆತ್ಮಹತ್ಯೆ

Update: 2016-12-15 18:44 GMT

ಶಿರ್ವ, ಡಿ.15: ಪ್ರೇಮ ವೈಫಲ್ಯದಿಂದ ಮನನೊಂದ ಯುವತಿಯೊಬ್ಬಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುತ್ಯಾರು ಗ್ರಾಮದ ಉಜೂರು ಎಂಬಲ್ಲಿ ನಡೆದಿದೆ.

ಮೃತಳನ್ನು ಉಜೂರು ನಿವಾಸಿ ಸಂಜೀವ ಮೂಲ್ಯ ಎಂಬವರ ಮಗಳು ಮಂಜುಳಾ(24) ಎಂದು ಗುರುತಿಸಲಾಗಿದೆ. ಅವರು ಮಂಗಳವಾರ ಬೆಳಗ್ಗೆ ಶಿರ್ವದಲ್ಲಿರುವ ಬ್ಯಾಂಕ್‌ಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವರು ವಾಪಸು ಬಾರದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಮನೆಯವರು ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಆದರೆ ಇಂದು ಅವರ ಮೃತದೇಹ ಮನೆ ಸಮೀಪದ ಸುಧಾಕರ ಶೆಟ್ಟಿ ಎಂಬವರ ಆವರಣ ಇಲ್ಲದ ಬಾವಿಯಲ್ಲಿ ಪತ್ತೆಯಾಗಿದೆ. ಅವರು ಕೆಲ ಸಮಯಗಳಿಂದ ಮಟ್ಟಾರಿನ ಅರುಣ್ ಎಂಬಾತನನ್ನು ಪ್ರೀತಿಸುತ್ತಿದ್ದು, ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿ ಮಂಜುಳಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News