ನೋಟು ರದ್ದತಿಯ ಒತ್ತಡಕ್ಕೆ ಇನ್ನೊಬ್ಬ ಬ್ಯಾಂಕ್ ಅಧಿಕಾರಿ ಬಲಿ

Update: 2016-12-19 09:09 GMT
ಸಾಂದರ್ಭಿಕ ಚಿತ್ರ

ಜೈಪುರ, ಡಿ.19: ನೋಟು ರದ್ದತಿಯ ಒತ್ತಡಕ್ಕೆ ಸಿಲುಕಿ ಸ್ಟೇಟ್‌ ಬ್ಯಾಂಕ್‌ ಅಫ್‌ ಇಂಡಿಯಾದ ಮೂವತ್ತಮೂರರ ಹರೆಯದ ಕ್ಯಾಶರ್ ಒಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬನಾಸ್ಕಂತಾ ಜಿಲ್ಲೆಯ ಥಾರಡ್‌ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.

ಕೆಲಸದ ಒತ್ತದ ತಾಳಲಾರದೆ ಬ್ಯಾಂಕ್‌ ಅಧಿಕಾರಿ ಪ್ರೇಮ್‌ ಶಂಕರ್‌ ಪ್ರಜಾಪತಿ ಎಂಬವರು ತನ್ನ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಜಸ್ಥಾನದ ಬಾರ್ಮರ್‌ ನಿವಾಸಿ ಪ್ರೇಮ್‌ ಶಂಕರ್‌  ಕಳೆದ ಒಂದೂವರೆ ವರ್ಷದಿಂದ ಸ್ಟೇಟ್‌ ಬ್ಯಾಂಕ್‌ ಅಫ್‌ ಇಂಡಿಯಾದ ಥಾರಡ್ ಶಾಖೆಯಲ್ಲಿ ಕ್ಯಾಶರ್ ಆಗಿ  ಸೇವೆ ಸಲ್ಲಿಸುತ್ತಿದ್ದರು. ನೋಟು ರದ್ದತಿಯ ಬಳಿಕ ಕೆಲಸದ ಒತ್ತಡಕ್ಕೆ ಒಳಗಾಗಿದ್ದರು ಎಂದು ಅವರ ಪತ್ನಿ ಮಂಜುಳಾ ತಿಳಿಸಿದ್ದಾರೆ.♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News