ಸಚಿವ ಪ್ರಮೋದ್ ಮಧ್ವರಾಜ್ ಪ್ರವಾಸ
ಉಡುಪಿ, ಡಿ.29: ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಡಿ.30ರಿಂದ ಜ.1ರವರೆಗೆ ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಡಿ.30ರಂದು ಬೆಳಗ್ಗೆ 9:30ಕ್ಕೆ ನೀಲಾವರ ಎಳ್ಳಂಪಳ್ಳಿಯಲ್ಲಿ ನೀಲಾವರ-ಎಳ್ಳಂಪಳ್ಳಿ ರಸ್ತೆಗೆ ಗುದ್ದಲಿ ಪೂಜೆ, 10ಕ್ಕೆ ಉಡುಪಿ ಸರಕಾರಿ ಬಾಲಕಿಯರ ಪಪೂ ಕಾಲೇಜಿನಲ್ಲಿ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ, 11ಕ್ಕೆ ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಕಚೇರಿ ಉದ್ಘಾಟನೆ, 11:30ಕ್ಕೆ ಉಡುಪಿ ತಾಪಂ ಸಭಾಂಗಣದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಮೀನುಗಾರರಿಗೆ ಹೊಸ ಬೋಟ್ನ ನಿರ್ಮಾಣಕ್ಕೆ ಸಾಧ್ಯತಾ ಪತ್ರ ವಿತರಣೆ, ಅಪರಾಹ್ನ 3ಕ್ಕೆ ಕರ್ಜೆ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹೊಸೂರು ಗ್ರಾಮದ ಜನಸಂಪರ್ಕ ಸಭೆ, ಸಂಜೆ 5:30ಕ್ಕೆ ನಾಲ್ಕೂರುನಲ್ಲಿ ಕಜ್ಕೆ ಕೊಳ-ಕುಮ್ಕಿ ಮತ್ತು ಕಣ್ಣನಬೆಟ್ಟು ಕಿಂಡಿ ಅಣೆಕಟ್ಟು ಉದ್ಘಾಟನೆ, 6ಕ್ಕೆ ಉಪ್ಪೂರು ಜಿಲ್ಲಾ ಹಿಪ್ರಾ ಶಾಲಾ ವಾರ್ಷಿಕೋತ್ಸವ, 7ಕ್ಕೆ ಕುಕ್ಕಿಕಟ್ಟೆ ಮಾರ್ಪಳ್ಳಿ ಅಯ್ಯಪ್ಪಸ್ವಾಮಿ ಭಕ್ತ ವೃಂದದ ಧಾರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ 8ಕ್ಕೆ ಕಟಪಾಡಿ ಸುಭಾಷ್ನಗರ-ಸರಕಾರಿಗುಡ್ಡೆ ಯೂತ್ ಬೆಸ್ಟ್ ಫ್ರೆಂಡ್ಸ್ ವಾರ್ಷಿಕೋತ್ಸವ. ಡಿ.31ರಂದು ಬೆಳಗ್ಗೆ 9ಕ್ಕೆ ಮಲ್ಪೆಚನ್ನಬಸವೇಶ್ವರ ಭಜನಾ ಮಂದಿರ ಮಲ್ಪೆ-ನೆರ್ಗಿ ಇಲ್ಲಿ ಉಚಿತ ವೈದ್ಯಕೀಯ ಆರೋಗ್ಯ ಶಿಬಿರ ಉದ್ಘಾಟನೆ, 9:30ಕ್ಕೆಮಲ್ಪೆತೊಟ್ಟಂನಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರೊಂದಿಗೆ ಪರಿಶಿಷ್ಟ ಜಾತಿ ಮಹಿಳಾ ಮೀನುಗಾರರ ವಿವಿದೋದ್ದೇಶ ಪ್ರಾಥಮಿಕ ಸಹಕಾರ ಸಂಘದ ಕಟ್ಟಡಕ್ಕೆ ಶಿಲಾನ್ಯಾಸ, 11ಕ್ಕೆ ಹೆರಂಜಾಲು ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲಾ ಕಟ್ಟಡದ ಉದ್ಘಾಟನೆ, 11:30ಕ್ಕೆ ಮೂರೂರಿನಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರೊಂದಿಗೆ ಆದಿವಾಸಿ ಬುಡಕಟ್ಟು ಸಮುದಾಯಗಳೊಂದಿಗೆ ಸಮಾಲೋಚನಾ ಸಭೆ, ಸಂಜೆ 6ಕ್ಕೆ ಉಡುಪಿ ಪುತ್ತೂರು ಸುಬ್ರಹ್ಮಣ್ಯನಗರದಲ್ಲಿ ಮೇಘಾ ಫ್ರೆಂಡ್ಸ್ನ ವಾರ್ಷಿಕೋತ್ಸವ, ಸಂಜೆ 7ಕ್ಕೆ ಉಡುಪಿ ಕೊಳಂಬೆ ಮಹಾತ್ಮಾಗಾಂಧಿ ಉದ್ಯಾನವನದಲ್ಲಿ ಕೊಳಂಬೆ ಶಾಂತಿನಗರ ಅಭಿವೃದ್ದಿ ಸಮಿತಿ ವಾರ್ಷಿಕೋತ್ಸವ, 8ಕ್ಕೆ ಚೇರ್ಕಾಡಿ ಆದರ್ಶ ನಗರ ಮಡಿ ಇಲ್ಲಿ ಆದರ್ಶ ಸಂಘದ ವಾರ್ಷಿಕೋತ್ಸವ.
ಜ.1ರಂದು ಬೆಳಗ್ಗೆ 10ಕ್ಕೆ ಉಡುಪಿ ಕೊರಂಗ್ರಪಾಡಿ ಬೈಲೂರಿನಲ್ಲಿ ಪಶು ವೈದ್ಯಕೀಯ ಕಟ್ಟಡದ ಉದ್ಘಾಟನೆ, 11:30ಕ್ಕೆ ಅಂಬಲಪಾಡಿ ಗ್ರಾಪಂ ವ್ಯಾಪ್ತಿಯ ವಿವಿಧ ಅಭಿವೃದ್ದಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ಬಳಿಕ ಬೆಂಗಳೂರಿಗೆ ಪ್ರಯಾಣ.