ರದ್ದುಗೊಂಡ ಮಂಗಳೂರು-ದುಬೈ ಜೆಟ್ ಏರ್‌ವೇಸ್ ಯಾನ : ಪ್ರಯಾಣಿಕರಿಗೆ ಜ.1ರಿಂದ 4ರವರೆಗೆ ಅನುವು

Update: 2016-12-31 17:14 GMT

ಮಂಗಳೂರು, ಡಿ. 31: ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದು ರಾತ್ರಿ 11:25ಕ್ಕೆ ನೇರವಾಗಿ ಮಂಗಳೂರಿನಿಂದ ದುಬೈಗೆ ಹೊರಡಬೇಕಾಗಿದ್ದ ಜೆಟ್ ಏರ್‌ವೇಸ್ ವಿಮಾನದ ಎಲ್ಲಾ ಪ್ರಯಾಣಿಕರಿಗೆ ಸೀಟು ಲಭ್ಯತೆಯಂತೆ ಜ.1,2,3 ಮತ್ತು 4ರಂದು ಕಾಯ್ದಿರಿಸಿ ಹೊರಡಲು ಅವಕಾಶ ಕಲ್ಪಿಸಲಾಗಿದೆ.

 ದುಬೈಯಲ್ಲಿ ಮಂಜು ಕವಿದ ವಾತಾವರಣ ಇದ್ದುದರಿಂದ ಇಂದು ರಾತ್ರಿ 11:25ಕ್ಕೆ ಹೊರಡಬೇಕಾಗಿದ್ದ 9ಡಬ್ಲು532 ಜೆಟ್ ಏರ್‌ವೇಸ್ ವಿಮಾನ ಯಾನವು ರದ್ದುಗೊಂಡಿದೆ ಎಂದು ಹೇಳಲಾಗಿದ್ದು, ಇದರಿಂದಾಗಿ ಪ್ರಯಾಣಿಕರಲ್ಲಿ ಗೊಂದಲ ಏರ್ಪಟಿತ್ತು.

ಇದೀಗ ಜ. 1, 2, 3 ಮತ್ತು 4ರಂದು ಹೊರಡುವ ವಿಮಾನವು ನೇರವಾಗಿ ದುಬೈಗೆ ತೆರಳದೆ, ಮುಂಬಯಿ ಮೂಲಕ ದುಬೈಗೆ ತೆರಳಲಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News