ಅತ್ತೆಯ ಕಿರುಕುಳ ಆರೋಪ: ನವವಿವಾಹಿತೆ ಆತ್ಮಹತ್ಯೆ

Update: 2017-01-08 18:52 GMT

ಶಂಕರನಾರಾಯಣ, ಜ.8: ಅತ್ತೆಯ ಕಿರುಕುಳದಿಂದ ಮನನೊಂದ ನವ ವಿವಾಹಿತೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿ ಕೊಂಡ ಘಟನೆ ಜ.7ರಂದು ಆಜ್ರಿ ಗ್ರಾಮದ ಹನೆಬಚ್ಚಲು ಎಂಬಲ್ಲಿ ನಡೆದಿದೆ.

ಮೃತರನ್ನು ಹನೆಬಚ್ಚಲು ನಿವಾಸಿ ಉಮೇಶ್ ಪೂಜಾರಿ ಎಂಬವರ ಪತ್ನಿ ಜ್ಯೋತಿ(26) ಎಂದು ಗುರುತಿಸಲಾಗಿದೆ. ಬಳ್ಕೂರು ಗ್ರಾಮದ ಉಗ್ರಾಣಿ ಬೆಟ್ಟುವಿನ ರತ್ನಾ ಎಂಬವರ ಮಗಳು ಜ್ಯೋತಿ 4 ವರ್ಷಗಳಿಂದ ಉಮೇಶ್‌ರನ್ನು ಪ್ರೀತಿಸಿ ಒಂಬತ್ತು ತಿಂಗಳ ಹಿಂದೆ ಮದುವೆಯಾಗಿದ್ದರು.

ಬಳಿಕ ಉಮೇಶ್ ಆಕೆಯನ್ನು ತನ್ನ ಮನೆಯಲ್ಲಿ ಬಿಟ್ಟು ಬೆಂಗಳೂರಿಗೆ ಕೆಲಸಕ್ಕೆಂದು ತೆರಳಿದ್ದರು. ಈ ವೇಳೆ ಅತ್ತೆ ನೀಡುತ್ತಿದ್ದ ಮಾನಸಿಕ ಹಿಂಸೆಯಿಂದ ಮನನೊಂದ ಜ್ಯೋತಿ ಮನೆಯಲ್ಲಿ ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡರು. ಕೂಡಲೇ ಆಕೆಯನ್ನು ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅವರು ಚಿಕಿತ್ಸೆ ಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News