ತ್ಯಾಜ್ಯ ನಿರ್ವಹಣೆಗೆ ನೂತನ ತಂತ್ರಜ್ಞಾನ ಕಂಡುಹಿಡಿಯಲು ತಜ್ಞ ಸಮಿತಿಗೆ ಆರ್.ಎ.ಮಶೇಲ್ಕರ್ ನೇಮಕ

Update: 2017-01-11 17:33 GMT

ಹೊಸದಿಲ್ಲಿ, ಜ.11: ಘನತ್ಯಾಜ್ಯ, ನೈರ್ಮಲ್ಯ, ಚರಂಡಿ ವ್ಯವಸ್ಥೆ ಮತ್ತು ನೀರು ಪೂರೈಕೆ ವ್ಯವಸ್ಥೆಯ ನಿರ್ವಹಣೆಗೆ ಸೂಕ್ತ ತಂತ್ರಜ್ಞಾನವನ್ನು ಕಂಡುಹಿಡಿಯುವ ಉದ್ದೇಶದ ತಜ್ಞ ಸಮಿತಿಯ ಮುಖ್ಯಸ್ಥರನ್ನಾಗಿ ಸಿಎಸ್‌ಐಆರ್‌ನ ಮಾಜಿ ಮಹಾನಿರ್ದೇಶಕ ಆರ್.ಎ.ಮಶೇಲ್ಕರ್ ಅವರನ್ನು ಹೆಸರಿಸಲಾಗಿದೆ. ಕೇಂದ್ರ ಸರಕಾರದ ಮಹಾತ್ವಾಕಾಂಕ್ಷೆಯ ಯೋಜನೆಯಾದ ಸ್ವಚ್ಛ ಭಾರತ ಅಭಿಯಾನವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಈ ಸಮಿತಿಯನ್ನು ರಚಿಸಲಾಗಿದೆ.

2019ರ ವೇಳೆಗೆ ಸ್ವಚ್ಛ ಭಾರತ ಕಲ್ಪನೆಯನ್ನು ಸಾಕಾರಗೊಳಿಸುವುದು ಸರಕಾರದ ಅಪೇಕ್ಷೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News