ನಾಳೆ ಎರ್ನಾಕುಲಂನಲ್ಲಿ ಕೋಮುವಾದಿ ವಿರೋಧಿ ಸಂಗಮ

Update: 2017-01-11 18:33 GMT

    ಕಾಸರಗೋಡು, ಜ.11: ದಲಿತ, ಹಿಂದುಳಿದ, ಆದಿವಾಸಿ, ಅಲ್ಪಸಂಖ್ಯಾಂತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ಕೊನೆಗೊಳಿಸಬೇಕು, ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಹುನ್ನಾರದಿಂದ ಕೇಂದ್ರ ಸರಕಾರ ಹಿಂದೆ ಸರಿಯಬೇಕು, ವಿಚಾರಣಾಧೀನ ಕೈದಿಯಲ್ಲಿ ಜೈಲಿನಲ್ಲಿರುವ ಅಬ್ದುನ್ನಾಸರ್ ಮಅದನಿಯನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಪಿಡಿಪಿ ರಾಜ್ಯ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಅಭಿಯಾನದ ಅಂಗವಾಗಿ ಜ.13ರಂದು ಎರ್ನಾಕುಲಂನಲ್ಲಿ ಕೋಮುವಾದಿ ವಿರೋಧಿ ಸಂಗಮ ಆಯೋಜಿಸಲಾಗಿದೆ ಎಂದು ಪಿಡಿಪಿ ರಾಜ್ಯ ಕಾರ್ಯಾಧ್ಯಕ್ಷ ಪೂಂದುರ ಸಿರಾಜ್ ಹೇಳಿದರು,

ಅವರು ಬುಧವಾರ ಕಾಸರಗೋಡಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

   ಮಅದನಿಯವರ ಆರೋಗ್ಯ ಹದೆಗೆಟ್ಟಿದೆ. ಈ ಹಿನ್ನೆಲೆಯಲ್ಲಿ ಕೇರಳ ಸಚಿವರ ನಿಯೋಗವನ್ನು ಬೆಂಗಳೂರಿಗೆ ಕಳುಹಿಸಿ ಅವರಿಗೆ ಚಿಕಿತ್ಸೆಯನ್ನು ಖಾತರಿಪಡಿಸಬೇಕು. ಮಅದನಿ ಬಿಡುಗಡೆಗೆ ಕರ್ನಾಟಕ ಸರಕಾರ ಮತ್ತು ಎಐಸಿಸಿ ಮಧ್ಯಸ್ಥಿಕೆ ವಹಿಸಬೇಕು ಎಂದು ಒತ್ತಾಯಿಸಿದರು.

  ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಮುಖಂಡರಾದ ಕೊಟ್ಟಾರಕರ ಷಾ, ವರ್ಕಲ್ ರಾಜ್, ಕೆ .ಇ.ಅಬ್ದುಲ್ಲ, ಜಾಫರ್ ಅಲಿ , ಮುಹಮ್ಮದ್ ರಜೀಬ್, ವೇಲಾಯುಧನ್, ಯೂನುಸ್ ತಳಂಗರೆ, ಎಸ್.ಎಂ.ಬಶೀರ್, ನಿಸಾರ್ ಮೇತಾ, ಮೊಯ್ದಿನ್, ಕೃಷ್ಣನ್ ಕುಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News