ಬೆಂಕಿ ಅನಾಹುತ: ಬ್ಯಾಂಕ್ , ಅಂಚೆ ಕಚೇರಿ, 20 ಅಂಗಡಿಗೆ ಹಾನಿ

Update: 2017-01-13 16:23 GMT

ಶ್ರೀನಗರ, ಜ.13: ಇಲ್ಲಿಯ ಲಾಲ್‌ಚೌಕದ ಬಳಿ ಇಂದು ಸಂಭವಿಸಿದ ಭಾರೀ ಅಗ್ನಿದುರಂತದಲ್ಲಿ 20 ಅಂಗಡಿಗಳು, ಎರಡು ಬ್ಯಾಂಕ್ ಶಾಖೆ ಮತ್ತು ಅಂಚೆ ಕಚೇರಿಗೆ ಹಾನಿಯಾದ ಘಟನೆ ನಡೆದಿದೆ.

ನಗರದ ಕೋರ್ಟ್ ರೋಡ್‌ನಲ್ಲಿರುವ ಕಟ್ಟಡವೊಂದರಲ್ಲಿ ಇಂದು ಬೆಳಗ್ಗಿನ ಜಾವ ಬೆಂಕಿ ಕಾಣಿಸಿಕೊಂಡಿದ್ದು ಅದೇ ಕಟ್ಟಡದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಶಾಖೆಗೆ ವ್ಯಾಪಿಸಿತು. ಬಳಿಕ ಈ ಕಟ್ಟಡಕ್ಕೆ ಹೊಂದಿಕೊಂಡಿದ್ದ ಮತ್ತೊಂದು ಕಟ್ಟಡಕ್ಕೂ ವ್ಯಾಪಿಸಿದ ಬೆಂಕಿಯನ್ನು ಹತೋಟಿಗೆ ತರಲು ಅಗ್ನಿಶಾಮಕ ದಳದವರು ಹರಸಾಹಸ ಪಟ್ಟು ಕಡೆಗೂ ನಿಯಂತ್ರಣಕ್ಕೆ ತಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News