ಗಂಗಾನದಿಯಲ್ಲಿ ಮುಳುಗಿದ ದೋಣಿ;ಮೃತಪಟ್ಟವರ ಸಂಖ್ಯೆ 25

Update: 2017-01-15 04:28 GMT

ಪಾಟ್ನಾ, ಜ.15: ಬಿಹಾರದ ರಾಜಧಾನಿ ಪಾಟ್ನಾದ ಗಂಗಾನದಿಯಲ್ಲಿ   ದೋಣಿ ಮುಳುಗಿ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿದೆ.
ದೋಣಿಯಲ್ಲಿ 40ಕ್ಕೂ ಅಧಿಕ ಜನರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಮೃತಪಟ್ಟವರ ಕುಟುಂಬಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಲಾ 2ಲಕ್ಷ ರೂ. ಘೋಷಿಸಿದ್ದಾರೆ. ಗಾಯಗೊಂಡವರಿಗೆ ತಲಾ 50 ಸಾವಿರ ರೂ. ಪ್ರಕಟಿಸಿದ್ದಾರೆ. ನಾಪತ್ತೆಯಾದವರಿಗೆ ಎನ್ ಡಿಎಫ್ ನ ಮೂರು ತಂಡಗಳು ಕಾರ್ಯಾಚರಣೆ ನಡೆಸುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News