ಮದ್ಯ ವಶ: ನಾಲ್ವರ ಬಂಧನ

Update: 2017-01-15 18:51 GMT

ಮಂಜೇಶ್ವರ, ಜ.15: ಹಲವು ವಿವಿಧ ಪ್ರಕರಣಗಳಿಂದ 37 ಲೀ. ಮದ್ಯವನ್ನು ಕುಂಬಳೆ ಎಕ್ಸೈಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ನಾಲ್ವರನ್ನು ಬಂಧಿಸಿದ ಘಟನೆ ವರದಿಯಾಗಿದೆ.

ಕಾಞಂಗಾಡು ಅಜಾನೂರು ಕಡಪ್ಪುರದ ಮುತ್ತಪ್ಪವೌನೇಶ ಗೌಡಗಿ(21), ಅನಿಲ್(48), ಕೆ.ರಮೇಶನ್ (46), ಕೊಲ್ಲಂಗಾನದ ಜೋಸೆಫ್ ಡಿಸೋಜ(57) ಬಂಧಿತರು. ಶನಿವಾರ ಸಂಜೆ ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಮದ್ಯ ಸಾಗಾಟ ಮಾಡುತ್ತಿದ್ದು, ಪೊಸೋಟ್ ಬಳಿ ವಾಹನ ತಪಾಸಣೆ ವೇಳೆ ಪತ್ತೆ ಹಚ್ಚಲಾಗಿದೆ ಎಂದು ತಿಳಿದು ಬಂದಿದೆ.

ಕುಂಬಳೆ ರೇಂಜ್ ಇನ್‌ಸ್ಪೆಕ್ಟರ್ ರೋಬಿನ್ ಬಾಬು, ಅಸಿಸ್ಟಂಟ್ ಇನ್‌ಸ್ಪೆಕ್ಟರ್‌ಗಳಾದ ಎಂ.ವಿ. ಬಾಬುರಾಜ್, ಎಂ.ಪವಿತ್ರನ್ ಕಾರ್ಯಾಚರಣೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News