ಕಾಸರಗೋಡು: ಬೈಕ್-ಸ್ಕೂಟರ್ ಢಿಕ್ಕಿ, ಓರ್ವ ಸಾವು

Update: 2017-01-16 04:41 GMT

ಕಾಸರಗೋಡು, ಜ.16:  ಬೈಕ್ -ಸ್ಕೂಟರ್ ಢಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಆದಿತ್ಯವಾರ ರಾತ್ರಿ ಕುಂಬಳೆಯಲ್ಲಿ ನಡೆದಿದೆ.

ಮೃತಪಟ್ಟವರನ್ನು ಕುಂಬಳೆಯ ಸುರೇಶ್ (41) ಎಂದು ಗುರುತಿಸಲಾಗಿದೆ. ಮಾಯಿಪ್ಪಾಡಿಯ ಅಮು, ಸುಮಲತಾ ಎಂಬವರು ಗಾಯಗೊಂಡಿದ್ದಾರೆ.
ಬದಿಯಡ್ಕ-ಕುಂಬಳೆ ರಸ್ತೆಯ  ಜಿಲ್ಲಾ ಸಹಕಾರಿ ಆಸ್ಪತ್ರೆ ಮುಂಭಾಗದಲ್ಲಿ ಅಪಘಾತ ನಡೆದಿದೆ.

ಗಂಭೀರ ಗಾಯಗೊಂಡ ಸುರೇಶ್ ರವರನ್ನು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಲಿಲ್ಲ.  ಇತರ ಇಬ್ಬರನ್ನು ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News