ಉರ್ವ ತಾತ್ಕಾಲಿಕ ಮಾರುಕಟ್ಟೆಯ ಸಮಸ್ಯೆಗಳಿಗೆ ಶಾಸಕರ ಸ್ಪಂದನೆ

Update: 2017-01-17 18:42 GMT

ಮಂಗಳೂರು, ಜ.17: ಉರ್ವ ತಾತ್ಕಾಲಿಕ ಮಾರುಕಟ್ಟೆಯ ವಿದ್ಯುತ್ ಸಮಸ್ಯೆಗಳನ್ನು ಕೂಡಲೇ ದುರಸ್ತಿಗೊಳಿಸಿ, ಅಲ್ಲಿನ ಮಾರಾಟಗಾರರಿಗೆ ದೈನಂದಿನ ಚಟುವಟಿಕೆಗಳನ್ನು ಸುಸೂತ್ರವಾಗಿ ನಡೆಸಲು ಅನುವು ಮಾಡಿಕೊಡಬೇಕೆಂದು ಶಾಸಕ ಜೆ.ಆರ್. ಲೋಬೊ ಸ್ಥಳದಲ್ಲಿಯೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಉರ್ವ ಮಾರ್ಕೆಟ್ ನೂತನ ಕಟ್ಟಡಕ್ಕೆ ಈಗಾಗಲೇ ಶಿಲಾನ್ಯಾಸ ನೆರವೇರಿಸಲಾಗಿದ್ದು, ಸುಮಾರು 12ಕೋ.ರೂ. ಅನುದಾನದಲ್ಲಿ ಈ ಮಾರುಕಟ್ಟೆಯ ಕಾಮಗಾರಿಯನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು. ಮಾರುಕಟ್ಟೆಯ ಮಾರಾಟಗಾರರಿಗೆ ಪಕ್ಕದ ಸರಕಾರಿ ಜಾಗದಲ್ಲಿ ಜಾಗ ಒದಗಿಸಲಾಗಿದೆ. ಮೇಲ್ಛಾವಣಿ ನಿರ್ಮಿಸಿ, ಉತ್ತಮ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತೀ ಅಂಗಡಿಗಳಿಗೆ ವಿದ್ಯುತ್ ಸಂಬಂಧಿತ ವಿಷಯದಲ್ಲಿ ಕೊಂಚ ಸಮಸ್ಯೆಯಿದ್ದು, ಶಾಸಕರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ಸೂಚಿಸಿದರು.

 ಈ ಸಂದರ್ಭದಲ್ಲಿ ಮುಡಾ ಅಧ್ಯಕ್ಷ ಸುರೇಶ್ ಬಲ್ಲಾಳ್, ಆಯುಕ್ತ ಶ್ರೀಕಾಂತ್ ರಾವ್, ಪಾಲಿಕೆಯ ಆಯುಕ್ತ ಮುಹಮ್ಮದ್ ನಝೀರ್, ಮನಪಾ ಸದಸ್ಯರಾದ ರಾಧಾಕೃಷ್ಣ, ಲತಾ ಸಾಲ್ಯಾನ್, ಮೆಸ್ಕಾಂ ಅಧಿಕಾರಿಗಳಾದ ಸುಬ್ರಹ್ಮಣ್ಯ, ಚಂದ್ರಶೇಖರ್, ಪಾಲಿಕೆಯ ಅಧಿಕಾರಿಗಳಾದ ಯಶವಂತ ಕಾಮತ್, ಗುರುರಾಜ್ ಮರಳಹಳ್ಳಿ, ಟಿ.ಕೆ. ಸುಧೀರ್, ಶಶಿರಾಜ್ ಅಂಬಟ್, ಕಮಲಾಕ್ಷ ಸಾಲ್ಯಾನ್, ಸ್ಟಾನಿ ಆಳ್ವಾರಿಸ್, ಚೇತನ್ ಕುಮಾರ್, ಡೆನ್ಝಿಲ್ ಡಿಸೋಜ, ಹರ್ಬರ್ಟ್ ಡಿಸೋಜ, ವರುಣ್ ರಾಜ್ ಅಂಬಟ್, ಉದಯ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News