ವಾರ್ಡ್ ಮಟ್ಟದ ಜನಸಂಪರ್ಕ ಸಭೆ
Update: 2017-01-19 18:42 GMT
ಉಡುಪಿ, ಜ.19: ಉಡುಪಿ ನಗರಸಭಾ ವ್ಯಾಪ್ತಿಯ 15ನೆ ಸೆಟ್ಟಿಬೆಟ್ಟು ವಾರ್ಡ್ನ ಜನಸಂಪರ್ಕ ಸಭೆ ಪರ್ಕಳದ ವಿಘ್ನೇಶ್ವರ ಸಭಾಭವನದಲ್ಲಿ ಜ.28ರಂದು ಅಪರಾಹ್ನ 3ಕ್ಕೆ ಹಾಗೂ 30ನೆ ಬೈಲೂರು ವಾರ್ಡಿನ ಜನಸಂಪರ್ಕ ಸಭೆ ಜ.30ರಂದು ಅಪರಾಹ್ನ 3ಕ್ಕೆ ಚಿಟ್ಟಾಡಿ ಶ್ರೀನಿವಾಸ ದೇವಸ್ಥಾನ ಜಂಕ್ಷನ್ ಬಳಿ ರಾಜ್ಯ ಮೀನುಗಾರಿಕೆ ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.