ದಿಲ್ಲಿ ತಂಡದಲ್ಲಿ ಧವನ್, ಇಶಾಂತ್‌ಗೆ ಸ್ಥಾನ

Update: 2017-01-21 17:28 GMT

ಹೊಸದಿಲ್ಲಿ, ಜ.21: ಸೈಯದ್ ಮುಶ್ತಾಕ್ ಅಲಿ ಟ್ರೋಫಿಗಾಗಿ ನಡೆಯಲಿರುವ ಟ್ವೆಂಟಿ-20 ಟೂರ್ನಿಗೆ ದಿಲ್ಲಿ ತಂಡವನ್ನು ಪ್ರಕಟಿಸಲಾಗಿದ್ದು, ಆರಂಭಿಕ ಆಟಗಾರ ಶಿಖರ್ ಧವನ್ ಹಾಗೂ ವೇಗದ ಬೌಲರ್ ಇಶಾಂತ್ ಶರ್ಮ ಸ್ಥಾನ ಪಡೆದಿದ್ದಾರೆ.

ದಿಲ್ಲಿ ತಂಡಕ್ಕೆ ಗೌತಮ್ ಗಂಭೀರ್ ನಾಯಕತ್ವವಹಿಸಿಕೊಳ್ಳಲಿದ್ದು, ಯುವ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಅರ್ಜುನ್ ಗುಪ್ತಾ ಅವರು ರಿಷಬ್ ಪಂತ್ ಬದಲಿಗೆ ಆಡಲಿದ್ದಾರೆ. ಪಂತ್ ಇಂಗ್ಲೆಂಡ್ ವಿರುದ್ಧ ಜ.26ರಂದು ಆರಂಭವಾಗಲಿರುವ ಟ್ವೆಂಟಿ-20 ಸರಣಿಗೆ ಆಯ್ಕೆಯಾಗಿದ್ದಾರೆ.

ಪ್ರಸ್ತುತ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕಳಪೆ ಫಾರ್ಮ್‌ನಲ್ಲಿರುವ ಶಿಖರ್ ಧವನ್ ಭಾರತ ತಂಡಕ್ಕೆ ಟ್ವೆಂಟಿ-20 ಸರಣಿಗೆ ಆಯ್ಕೆಯಾಗಿಲ್ಲ. ಇಶಾಂತ್ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಮಿಂಚದೇ ಕೆಲವು ಸಮಯ ಕಳೆದಿದೆ. ಐಪಿಎಲ್ ಆಟಗಾರರ ಹರಾಜಿಗೆ ಮೊದಲು ಉತ್ತಮ ಪ್ರದರ್ಶನ ನೀಡಲು ಬಯಸಿದ್ದಾರೆ. ಇಶಾಂತ್ ಪ್ರಸ್ತುತ ಐಪಿಎಲ್ ಒಪ್ಪಂದಕ್ಕೆ ಸಹಿಹಾಕಿಲ್ಲ.

ದಿಲ್ಲಿ ತಂಡ: ಗೌತಮ್ ಗಂಭೀರ್(ನಾಯಕ), ಉನ್ಮುಕ್ತ್ ಚಂದ್, ಶಿಖರ್ ಧವನ್, ನಿತಿಶ್ ರಾಣಾ, ಮಿಲಿಂದ್ ಕುಮಾರ್, ಕ್ಷಿತಿಜ್ ಶರ್ಮ, ಸಾರ್ಥಕ್ ರಂಜನ್, ಅರ್ಜುನ್ ಗುಪ್ತಾ, ಪವನ್ ನೇಗಿ, ಮನನ್ ಶರ್ಮ, ಇಶಾಂತ್ ಶರ್ಮ, ನವದೀಪ್ ಸೈನಿ, ವಿಕಾಸ್ ಟಾಕಸ್, ಪ್ರದೀಪ್ ಸಾಂಗ್ವಾನ್, ಸುಬೋಧ್ ಭಟಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News