ಕೆರೆಯಲ್ಲಿ ಮಹಿಳೆಯ ಮೃತದೇಹ ಪತ್ತೆ

Update: 2017-01-23 18:42 GMT

 ಕಾಸರಗೋಡು, ಜ.23: ಮಹಿಳೆಯೋರ್ವರ ಮೃತದೇಹ ತೋಟದ ಕೆರೆಯಲ್ಲಿ ಪತ್ತೆಯಾದ ಘಟನೆ ಸೋಮವಾರ ಬದಿಯಡ್ಕದಲ್ಲಿ ನಡೆದಿದೆ.

  ಮೃತಪಟ್ಟವರನ್ನು ಕರಿಂಬಿಲ ಬನಾರಿಯ ಜಯರಾಮ ಭಟ್ ಎಂಬವರ ಪತ್ನಿ ಲಲಿತಾ(58) ಎಂದು ಗುರುತಿಸಲಾಗಿದೆ.

ಬೆಳಗ್ಗೆ ಮನೆಯಿಂದ ತೋಟಕ್ಕೆಂದು ತೆರಳಿದ್ದ ಅವರು ಮರಳಿ ಮನೆಗೆ ಬರದಿ ದ್ದುದರಿಂದ ಮನೆಯವರು ಶೋಧ ನಡೆಸಿದಾಗ ತೋಟದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ.

ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ನಡೆಸಿದ್ದು, ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News