ಬೈಕ್ ಢಿಕ್ಕಿ: ಬಾಲಕ ಗಂಭೀರ ಗಾಯ
Update: 2017-01-23 18:43 GMT
ಉಪ್ಪಿನಂಗಡಿ, ಜ.23: ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಅಂಗನವಾಡಿಯ ಬಾಲಕನೋರ್ವ ಗಂಭೀರ ಗಾಯಗೊಂಡ ಘಟನೆ ಸೋಮವಾರ ತಣ್ಣೀರುಪಂಥ ಗ್ರಾಮದ ಹಲೇಜಿಯಲ್ಲಿ ನಡೆದಿದೆ.
ಹಲೇಜಿ ನಿವಾಸಿ ಪರಮೇಶ್ವರ ಎಂಬವರ ಪುತ್ರ ಗೌತಮ್(4) ಗಾಯಗೊಂಡ ಬಾಲಕ. ಈತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಗನವಾಡಿಯಿಂದ ಮನೆಗೆ ಹೋಗುವ ಸಂದರ್ಭ ರಸ್ತೆ ದಾಟುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ, ಅಪಘಾತವಸಗಿದ ಬೈಕ್ ಸವಾರ ಬಾಲಕನನ್ನು ಆಸ್ಪತ್ರೆ ದಾಖಲಿಸಲು ಸಹಕರಿಸಿದ್ದು, ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಬಾಲಕನ ಸ್ಥಿತಿಯೂ ಗಂಭೀರವಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪುತ್ತೂರು ಸಂಚಾರ ಪೊಲೀಸರು ಅಪಘಾತವೆಸಗಿದ ಬೈಕ್ ಸವಾರನ ಪತ್ತೆಗೆ ಬಲೆ ಬೀಸಿದ್ದಾರೆ.