ನಿಯಂತ್ರಣ ತಪ್ಪಿ ಕೆಸರಿಲ್ಲಿ ಹೂತ ಜೆಸಿಬಿ

Update: 2017-01-26 19:02 GMT

ಮೂಲ್ಕಿ, ಜ.26: ಜೆಸಿಬಿಯೊಂದು ನಿಯಂತ್ರಣ ತಪ್ಪಿಕೆಸರಿನಲ್ಲಿ ಹೂತು ಹೋದ ಘಟನೆ ಪಡುಪಣಂಬೂರಿನಲ್ಲಿ ಗುರುವಾರ ನಡೆದಿದೆ.

 ತುಂಬೆಯಿಂದ ಮೂಲ್ಕಿಗೆ ಬರುವ ನೀರಿನ ಪೈಪ್ ಪಡುಪಣಂಬೂರು ಕಿರು ಸೇತುವೆ ಬಳಿ ತೂತಾಗಿ ಮೂಲ್ಕಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಿತ್ತು.

ಮೂಲ್ಕಿ ನಪಂ ಮನವಿಯಂತೆ ಹೆದ್ದಾರಿ ಇಲಾಖೆಯು ರಸ್ತೆಯ ಬದಿಯಲ್ಲಿ ಪ್ರತ್ಯೇಕ ಪೈಪು ಅಳವಡಿಸುವ ಕಾಮಗಾರಿ ಕಳೆದ ಹಲವಾರು ದಿನಗಳಿಂದ ನಡೆಯುತ್ತಿದೆ. ಜೆಸಿಬಿ ಮೂಲಕ ಆಳದಲ್ಲಿ ಚರಂಡಿ ನಿರ್ಮಿಸಿ ಬಳಿಕ ನೂತನ ಪೈಪು ಜೋಡಿಸುವ ಕಾರ್ಯ ನಡೆಯುತ್ತಿರುವಾಗ ಪಡುಪಣಂಬೂರು ಕಿರು ಸೇತುವೆ ಬಳಿ ಮಣ್ಣಿನಲ್ಲಿ ನೀರಿನ ಅಂಶವಿರುವುದರಿಂದ ಜೆಸಿಬಿಯು ನಿಯಂತ್ರಣ ತಪ್ಪಿಚರಂಡಿಗೆ ನಿರ್ಮಿಸಿದ ಆಳವಾದ ಹೊಂಡದ ಒಳಗೆ ಸೇರಿಕೊಂಡಿದೆ. ಬಳಿಕ ಬೇರೆ ಜೆಸಿಬಿ ಮೂಲಕ ತೆಗೆಯುವ ಕಾರ್ಯ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News