ಕಣ್ಣೂರಿನಲ್ಲಿಸಿಪಿಎಂ ಕಾರ್ಯದರ್ಶಿ ಕೊಡಿಯೇರಿಯಿದ್ದ ವೇದಿಕೆಗೆ ಬಾಂಬೆಸೆತ: ಒಬ್ಬನಿಗೆ ಗಾಯ

Update: 2017-01-27 06:56 GMT

ಕಣ್ಣೂರ್,ಜ.27: ತಲಶ್ಶೇರಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್‌ರ ಭಾಷಣ ಮಾಡುತ್ತಿರುವ ವೇದಿಕೆ ಸಮೀಪ ಬಾಂಬೆಸೆತ ನಡೆದಿದೆ. ಒಬ್ಬರು ಗಾಯಗೊಂಡಿದ್ದಾರೆ.

ತಲಶ್ಶೇರಿ ನಿಂಙರತ್ ಪೀಡಿಗೆ ಎಂಬಲ್ಲಿ ನಡೆದ ಹುತಾತ್ಮ ಕೆ.ಪಿ. ಜಿಜೇಶ್ ಅನುಸ್ಮರಣಾ ಕಾರ್ಯಕ್ರಮಕ್ಕೆ ನಾಡ ಬಾಂಬೆಸೆಯಲಾಗಿದೆ. ಬಾಂಬೆಸೆತದಿಂದಾಗಿ ಡಿವೈಎಫ್‌ಐ ಕಾರ್ಯಕರ್ತ ದೇಶಾಭಿಮಾನಿ ಏಜೆಂಟ್ ಶರತ್‌ಲಾಲ್ ಗಾಯಗೊಂಡಿದ್ದಾರೆ.

ವೇದಿಕೆಯಲ್ಲಿ ಕೊಡಿಯೇರಿ ಬಾಲಕೃಷ್ಣನ್ ಮಾತಾಡುತ್ತಿದ್ದಾಗ ಬೈಕ್‌ನಲ್ಲಿ ಬಂದ ಅಪರಿಚಿತರು ವೇದಿಕೆ ಸಮೀಪದ ರಸ್ತೆಗೆ ಬಾಂಬ್ ಎಸೆದು ಪರಾರಿಯಾಗಿದ್ದಾರೆ. ಬಾಂಬ್ ರಸ್ತೆಗೆ ಬಿದ್ದು ಸ್ಫೋಟಗೊಂಡಿದೆ. ದಾಳಿಯ ಹಿಂದೆ ಆರೆಸ್ಸೆಸ್ ಕೈವಾಡ ಇದೆ ಎಂದು ಸಿಪಿಎಂ ಆರೋಪಿಸಿರುವುದಾಗಿ ವರದಿತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News