ವಿಷ ಸೇವಿಸಿ ದಂಪತಿ ಆತ್ಮಹತ್ಯೆಗೆ ಯತ್ನ: ಪತಿ ಮೃತ್ಯು

Update: 2017-01-27 18:48 GMT

ಉಪ್ಪಿನಂಗಡಿ, ಜ.27: ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಮುಗೇರಡ್ಕ ಬಳಿಯ ಪರಾರಿ ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ವಿಷ ಸೇವಿಸಿ ದಂಪತಿ ಆತ್ಮಹತ್ಯೆಗೆ ಯತ್ನಿಸಿದ್ದು, ಪತಿ ಮೃತಪಟ್ಟು, ಪತ್ನಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

  ಪರಾರಿ ನಿವಾಸಿ ದಿ.ನೇಮಣ್ಣ ಗೌಡ ಎಂಬವರ ಪುತ್ರ ಮೋಹನದಾಸ ಯಾನೆ ಮೋಹನ (28) ಮೃತ ವ್ಯಕ್ತಿ. ಇವರ ಪತ್ನಿ ಲಕ್ಷಿ್ಮ

ೀ ಗಂಭೀರಾ ವಸ್ಥೆಯಲ್ಲಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೂಲಿ ಕೆಲಸ ಮಾಡುತ್ತಿದ್ದ ಮೋಹನದಾಸ ಎರಡು ವರ್ಷಗಳ ಹಿಂದೆ ಲಕ್ಷಿ್ಮ ೀ ಎಂಬಾಕೆಯನ್ನು ವಿವಾಹವಾಗಿದ್ದು, ಪತಿ- ಪತ್ನಿಯಿಬ್ಬರು ಅನ್ಯೋನ್ಯ ವಾಗಿಯೇ ಸಂಸಾರ ನಡೆಸುತ್ತಿದ್ದರು. ತೀರಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಸಾಲ ಮಾಡಿದ್ದ ಮೋಹನದಾಸ್ ಸಾಲವನ್ನು ತೀರಿಸಲಾಗದೆ ನೊಂದಿದ್ದರು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಪತ್ನಿ ಲಕ್ಷಿ್ಮ ೀ ಶುಕ್ರವಾರ ಮಧ್ಯಾಹ್ನ ವಿಷ ಸೇವಿಸುತ್ತಿದ್ದಂತೆಯೇ ಆಕೆಯ ಕೈಯಿಂದ ವಿಷವನ್ನು ಕಿತ್ತುಕೊಂಡು ಮೋಹನದಾಸ ತಾನೂ ಸೇವಿಸಿ ಅಸ್ವಸ್ಥರಾಗಿದ್ದರೆನ್ನಲಾಗಿದೆ. ಸುದ್ದಿ ತಿಳಿದು ಸ್ಥಳೀಯರು ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದರು. ಆದರೆ, ಪುತ್ತೂರು ಆಸ್ಪತ್ರೆಯಲ್ಲಿ ಮೋಹನದಾಸ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಲಕ್ಷಿ್ಮ

ೀಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

*ಸಾಲಗಾರರ ಕಾಟ:

ಮೋಹನದಾಸ ವಿಪರೀತ ಸಾಲವನ್ನು ಮಾಡಿದ್ದು, ಈ ಹಿನ್ನೆಲೆಯಲ್ಲಿ ಸಾಲ ನೀಡಿದ ೈನಾನ್ಸ್‌ನವರು ಅವರಿಗೆ ಸತತ ೆನಾಯಿಸಿ ಮಾನಸಿಕ ಹಿಂಸೆ ನೀಡುತ್ತಿದ್ದರೆಂದು ತಿಳಿದು ಬಂದಿದೆ. ೈನಾನ್ಸ್‌ದಾರರ ಕಿರುಕುಳದಿಂದ ಬೇಸತ್ತು ದಂಪತಿ ಆತ್ಮಹತ್ಯೆಗೆ ಮುಂದಾಗಿದ್ದಾರೆಂದು ಮೃತ ಮೋಹನದಾಸರ ತಾಯಿ ಕಮಲಾ ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

 ಆದರೆ ಆತ್ಮಹತ್ಯೆಗೆ ಬೇರೆ ಕಾರಣಗಳಿವೆಯೇ ಎಂದು ತಿಳಿಯಲು ಪ್ರಸಕ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಕ್ಷಿ್ಮೀಯವರನ್ನು ಮಾತನಾಡಿಸಲು ಪೊಲೀಸ್ ಅಕಾರಿಗಳು ಪ್ರಯತ್ನಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News