ರಾಜಕೀಯ ಕೊಲೆಗಳನ್ನು ವಿರೋಧಿಸಿದ ವಿದ್ಯಾರ್ಥಿನಿಗೇ ಕೊಲೆ ಬೆದರಿಕೆ !

Update: 2017-01-30 07:44 GMT

ಗುರುವಾಯೂರ್,ಜ.30: ರಾಜಕೀಯ ಕೊಲೆಪಾತಕಗಳನ್ನು ಫೇಸ್ಬುಕ್ ಪೋಸ್ಟ್ ಮೂಲಕ ವಿರೋಧಿಸಿದ ಶಾಲಾ ವಿದ್ಯಾರ್ಥಿನಿಗೆ ತಂಡವೊಂದು ಬೆದರಿಕೆ ಹಾಕಿದೆ. ಕಣ್ಣೂರಿನ ರಾಜಕೀಯ ನರಮೇಧಗಳ ಕುರಿತು ಪ್ರಸ್ತಾಪಿಸಿ ಫೇಸ್‌ಬುಕ್‌ನಲ್ಲಿ ಕೊಲೆಪಾತಕ ರಾಜಕೀಯದ ವಿರುದ್ಧ ಪೋಸ್ಟ್ ಹಾಕಿದ ಗುರುವಾಯೂರು ತೊಯಿಯೂರ್ ಸ್ನೇಹಾ ಬಶೀರ್‌ಳಿಗೆ ಕಾರಿನಲ್ಲಿ ಬಂದ ತಂಡವೊಂದು ಕೊಲೆ ಬೆದರಿಕೆ ಒಡ್ಡಿದೆ.

ಅರ್ತಾಟ್ ಹೋಲಿ ಕ್ರಾಸ್ ಸ್ಕೂಲ್ ನ ಹತ್ತನೆ ತರಗತಿಯ ವಿದ್ಯಾರ್ಥಿನಿ ಸ್ನೇಹಾ ಬಶೀರ್ ರವಿವಾರ ಮಧ್ಯಾಹ್ನ ಟ್ಯೂಶನ್ ಮುಗಿಸಿ ಬರುತ್ತಿದ್ದಾಗ ಕಾರ್‌ನಲ್ಲಿ ಬಂದ ತಂಡ ವಿದ್ಯಾರ್ಥಿನಿಯ ಹತ್ತಿರ ಕಾರು ನಿಲ್ಲಿಸಿ ಕೊಲೆಪಾತಕ ರಾಜಕೀಯದ ವಿರುದ್ಧ ಧ್ವನಿಯೆತ್ತಿದರೆ ನಿನ್ನನ್ನು ಕೊಲ್ಲುತ್ತೇವೆ ಎಂದು ಬೆದರಿಸಿದೆ. ಫೇಸ್‌ಬುಕ್‌ನಲ್ಲಿ ಬರೆದ ಸ್ನೇಹಾ ನೀನೆಯಾ. ಇನ್ನು ಮುಂದೆ ಈರೀತಿ ಪೋಸ್ಟ್ ಹಾಕಿದರೆ ನಿನ್ನನ್ನೇ ಮುಗಿಸುತ್ತೇವೆ ಎಂದು ಹೇಳಿ ಹೊರಟು ಹೋಗಿದೆ. ಕಾರಿನಲ್ಲಿ ಎಷ್ಟು ಮಂದಿ ಇದ್ದರು ಎಂದು ಗೊತ್ತಾಗಿಲ್ಲ. ಕಾರಿನ ನಂಬರ್ ಗುರುತುಸಿಕ್ಕಿದ್ದು, ಘಟನೆಯ ವಿರುದ್ಧ ಸ್ನೇಹಾಳ ತಂದೆ ಬಶೀರ್ ಗುರುವಾಯೂರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಬಶೀರ್ ಗುರುವಾಯೂರು ನಗರಸಭೆಯಲ್ಲಿ ಕಾಂಗ್ರೆಸ್ ಕೌನ್ಸಿಲರ್ ಹಾಗೂ ಕಲಾಕಾರ ಕೂಡಾ ಆಗಿದ್ದಾರೆ. ಜನಜಾಗೃತಿಯ ಕುರಿತು ನಟ ಗುರುವಾಯೂರ್ ಶಿವಾಜಿ ಜೊತೆ ಬಶೀರ್ ನಾಟಕ ಮಾಡುತ್ತಿದ್ದಾರೆ. ಬಶೀರ್‌ರ ಲೋಕ ಎಂಬ ಫೇಸ್‌ಬುಕ್ ಖಾತೆಯಲ್ಲಿ ಸ್ನೇಹಾ ರಕ್ತದ ವಾಸನೆ ಇರು ವ ಹರತಾಳ ಎಂದು ವೀಡಿಯೊ ಸಂದೇಶ ಹಾಕಿದ್ದಳು. ಸ್ನೇಹಾಳ ವೀಡಿಯೊ ಪೋಸ್ಟ್ ಮಾಡಿದ ಒಂದು ಗಂಟೆಯಲ್ಲಿ 24 ಲಕ್ಷ ಮಂದಿ ಅದನ್ನು ನೋಡಿದ್ದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News