ರಜತ ಸಂಭ್ರಮ ಸಮಾರೋಪ

Update: 2017-02-05 18:31 GMT

ಹಿರಿಯಡ್ಕ, ೆ.5: ಕೋಟ್ನಕಟ್ಟೆ ್ರೆಂಡ್ಸ್ ಸರ್ಕಲ್‌ನ ಮೂರು ದಿನಗಳ ರಜತ ಸಂಭ್ರಮದ ಸಮಾರೋಪ ಸಮಾರಂಭವು ಇತ್ತೀಚೆಗೆ ಜರಗಿತು.

ಮುಖ್ಯ ಅತಿಥಿಗಳಾಗಿ ಅದಾನಿ ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ, ಸಿಕ್ಕಿಂ ಮಣಿಪಾಲ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಮನೋಜ್ ಕುಮಾರ್, ಪ್ರೇಮಾನಂದ ಪೈ ಮಾತನಾಡಿದರು. ಅಧ್ಯಕ್ಷತೆಯನ್ನು ಉದ್ಯಮಿ ದಯಾನಂದ ಮಲ್ಯ ವಹಿಸಿದ್ದರು. ಸಾರ್ವಜನಿಕರಿಗಾಗಿ ನಡೆದ ‘ವಿನೋದ ಕ್ರೀಡಾವಳಿಯ’ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಮೋಹನ್ ಕಡಬ ಅವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ದಿವಾಕರ ಭಂಡಾರಿ ಸ್ವಾಗತಿಸಿದರು. ಕಾರ್ಯದರ್ಶಿ ದೇವದಾಸ ಮರಾಠೆ ವಂದಿಸಿದರು. ಬಾಲಕೃಷ್ಣ ಬಿ.ಕೆ.ಕಾರ್ಯಕ್ರಮ ನಿರೂಪಿಸಿದರು. ರಾಘವೇಂದ್ರ ಜಿ., ಶ್ರೀಪತಿ ಆಚಾರ್ಯ, ಖಜಾಂಚಿ ಗುರುನಾಥ ಶೆಟ್ಟಿ, ಪ್ರವೀಣ್ ಮಾಣೈ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News