ಮುವ್ವಾರು: ವಿದ್ಯಾರ್ಥಿನಿ ಆತ್ಮಹತ್ಯೆ
Update: 2017-02-07 18:36 GMT
ಕಾಸರಗೋಡು, ಫೆ.7: ವಿದ್ಯಾರ್ಥಿಯೋರ್ವಳು ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬದಿಯಡ್ಕ ಠಾಣಾ ವ್ಯಾಪ್ತಿಯ ಮುವ್ವಾರಿನಲ್ಲಿ ನಡೆದಿದೆ.
ಮುವ್ವಾರು ಪಣಿಯೆಯ ಗೋಪಾಲ್ ಮಣಿಯಾಣಿ ಎಂಬವರ ಪುತ್ರಿ ಶ್ರೀಜಾ (18) ಆತ್ಮಹತ್ಯೆ ಮಾಡಿಕೊಂಡವರು.
ಶ್ರೀಜಾ ತಾಯಿ ಮತ್ತು ಸಹೋದರಿ ಕಾಸರಗೋಡಿಗೆ ಹೋಗಿ ಮರಳಿ ಬಂದಾಗ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದಾರೆ. ಬೊಬ್ಬೆ ಕೇಳಿ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಈಕೆ ಮಾಯಿಪ್ಪಾಡಿ ಡಯೆಟ್ನ ಶಿಕ್ಷಕ ತರಬೇತಿ ವಿದ್ಯಾರ್ಥಿನಿಯಾಗಿದ್ದರು. ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.