ಬಾವಿಗೆ ಬಿದ್ದು ಕೃಷಿಕ ಮೃತ್ಯು

Update: 2017-02-07 18:42 GMT

ಕಾಸರಗೋಡು, ಫೆ.7: ಮನೆಯ ಬಾವಿಗೆ ಬಿದ್ದು ಕೃಷಿಕರೋರ್ವರು ಮೃತಪಟ್ಟ ಘಟನೆ ಸೋಮವಾರ ರಾತ್ರಿ ಮುಳ್ಳೇರಿಯಾ ಸಮೀಪದ ಬೆಳ್ಳೂರಿನಲ್ಲಿ ನಡೆದಿದೆ.

ಮೃತಪಟ್ಟವರನ್ನು ಕಾಯರ್‌ಪದವು ಶ್ರೀಧರ ಪೂಜಾರಿ(50) ಎಂದು ಗುರುತಿ ಸಲಾಗಿದೆ. ಊಟ ಮಾಡಿ ಕೈ ತೊಳೆಯಲು ಹೊರಗಡೆ ಬಂದ ಸಂದರ್ಭದಲ್ಲಿ ಅಂಗಳದಲ್ಲಿ ಹೊಸದಾಗಿ ಕೊರೆದ ಬಾವಿಗೆ ಬಿದ್ದು ಈ ದುರ್ಘಟನೆ ಸಂಭವಿಸಿದೆ.

 ಶಬ್ದ ಕೇಳಿ ಮನೆಯವರು ಬಂದು ನೋಡಿದಾಗ ಬಾವಿಗೆ ಬಿದ್ದಿರುವುದು ಕಂಡು ಬಂದಿದೆ. ಸ್ಥಳೀಯರು ಅವರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಲ ಕಾರಿಯಾಗದೆ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News