'ಕೌಸ್ತುಭ' ಪ್ರಶಸ್ತಿಗೆ ಆಯ್ಕೆ

Update: 2017-02-08 12:23 GMT

ಮಂಗಳೂರು, ಫೆ.8: ಚುಟುಕು ಸಾಹಿತಿಗಳ ಮುಖವಾಣಿ ಕೌಸ್ತುಭ ಮಾಸಿಕವು ನೀಡುವ 'ಕೌಸ್ತುಭ' ಪ್ರಶಸ್ತಿಗೆ ದ.ಕ.ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ನ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ ಆಯ್ಕೆಯಾಗಿದ್ದಾರೆ.

7 ಕೃತಿಗಳನ್ನು ರಚಿಸಿರುವ ಇರಾ ನೇಮು ಪೂಜಾರಿ 10 ಜಿಲ್ಲಾ ಸಮ್ಮೇಳನಗಳನ್ನು ಸಂಘಟಿಸಿದ್ದಾರೆ. ಜಿಲ್ಲೆಯಲ್ಲ 3 ರಾಜ್ಯಸಮ್ಮೇಳನಗಳನ್ನು ಸಂಘಟಿಸಿದ್ದಾರೆ. ಕಾರಾಗೃಹ ಕೈದಿಗಳಿಗೆ ಚುಟುಕುಗೋಷ್ಠಿ ನಡೆಸಿದ್ದಾರೆ. ಸುಮಾರು 2,500 ವಿದ್ಯಾರ್ಥಿಗಳಿಗೆ ಚುಟುಕು ಸಾಹಿತ್ಯ ರಚನೆಗಾಗಿ ಕಮ್ಮಟ ನಡೆಸಿದ್ದಾರೆ.

ಫೆ.22ರಂದು ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News