17: ವಾರ್ಡ್ ಮಟ್ಟದ ಜನಸಂಪರ್ಕ ಸಭೆ

Update: 2017-02-10 18:34 GMT

ಉಡುಪಿ, ೆ.10: ಉಡುಪಿ ಅಜ್ಜರಕಾಡು ವಾರ್ಡಿನ ವಾರ್ಡ್ ಮಟ್ಟದ ಜನಸಂಪರ್ಕ ಸಭೆ ೆ.17ರಂದು ಅಪರಾಹ್ನ 3ಕ್ಕೆ ಅಜ್ಜರಕಾಡು ಸೈಂಟ್ ಸಿಸಿಲೀಸ್ ಪ್ರೌಢಶಾಲಾ ಸಭಾಂಗಣದಲ್ಲಿ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್‌ರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಈ ಸಭೆಯಲ್ಲಿ ತಾಲೂಕು ಮಟ್ಟದ ಎಲ್ಲಾ ಇಲಾಖಾಕಾರಿಗಳು ಹಾಜರಿದ್ದು ಸರಕಾರದಿಂದ ಸಿಗುವ ವಿವಿಧ ಸೌಲಭ್ಯಗಳ ಮಾಹಿತಿಯನ್ನು ನೀಡಲಿರುವರು. ಹಾಗೂ ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲು ಪ್ರಯತ್ನಿಸಲಿರುವರು. ಈ ಜನಸಂಪರ್ಕ ಸಭೆಯಲ್ಲಿ ಉಡುಪಿ ನಗರದ ಪ್ರತಿಷ್ಠಿತ ಭುಜಂಗ ಪಾರ್ಕ್‌ನ್ನು ಆಧುನಿಕವಾಗಿ ಅಭಿವೃದ್ಧಿ ಪಡಿಸುವ ಬಗ್ಗೆ ವಿಶೇಷವಾಗಿ ಚರ್ಚಿಸಲಿದ್ದು, ಸಭೆಗೆ ರಾಜ್ಯಸಭಾ ಸದಸ್ಯ ಆಸ್ಕರ್ ೆರ್ನಾಂಡಿಸ್ ಆಗಮಿಸಿ ಸಲಹೆ ಮಾರ್ಗದರ್ಶನ ನೀಡಲಿರುವರು. ಸಭೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆಯುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News