ಪಟಾಕಿ ತಯಾರಿಕೆ ಘಟಕದಲ್ಲಿ ಬೆಂಕಿ ಕಾರ್ಮಿಕರಿಬ್ಬರ ಸಜೀವ ದಹನ

Update: 2017-02-11 12:10 GMT

ವಿರುಧನಗರ(ತ.ನಾ),ಫೆ.11: ಇಲ್ಲಿಯ ಎಳಯಾರಂ ಪನ್ನೈನಲ್ಲಿಯ ಪಟಾಕಿ ತಯಾರಿಕೆ ಘಟಕದಲ್ಲಿ ಶನಿವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಕಾರ್ಮಿಕರಿಬ್ಬರು ಸಜೀವ ದಹನಗೊಂಡಿದ್ದು, ಇತರ ಕೆಲವರು ಗಾಯಗೊಂಡಿದ್ದಾರೆ.

ಅವಶೇಷಗಳಿಂದ ಸುಟ್ಟು ಕರಕಲಾಗಿರುವ ಇಬ್ಬರ ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ. ಎಷ್ಟು ಜನರು ಗಾಯಗೊಂಡಿದ್ದಾರೆ ಮತ್ತು ದುರಂತದ ಸಂದರ್ಭ ಎಷ್ಟು ಜನರು ಕಾರ್ಯನಿರತರಾಗಿದ್ದರು ಎಂಬ ವಿವರ ತಕ್ಷಣಕ್ಕೆ ಲಭ್ಯವಾಗಿಲ್ಲ.

ಫ್ಯಾಕ್ಟರಿಯ ಮಾಡಿನ ಕೆಲವು ತಗಡಿನ ಶೀಟುಗಳು ಬೆಂಕಿಯಿಂದಾಗಿ ಕೆಳಕ್ಕೆ ಬಿದ್ದಿದ್ದು ಅವುಗಳಡಿ ಸಿಕ್ಕಿಹಾಕಿಕೊಂಡವರನ್ನು ರಕ್ಷಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಬೆಂಕಿಗೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News