ಪ್ರತಾಪ್ ಪೂಜಾರಿ ಹತ್ಯೆ ಆರೋಪ ನಿರಾಕರಿಸಿದ ಹಿಂಜಾವೇ

Update: 2017-02-21 18:31 GMT

ಮಂಗಳೂರು, ಫೆ.21: ಮರೋಳಿ ಬಳಿಯ ನಿಡ್ಡೆಲ್‌ನಲ್ಲಿ ನಡೆದಿರುವ ಪ್ರತಾಪ್ ಪೂಜಾರಿಯ ಹತ್ಯೆ ಹಾಗೂ ಮಣಿಕಂಠನ ಮೇಲಿನ ಹಲ್ಲೆಯ ಘಟನೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಹೆಸರನ್ನು ಎಳೆದು ತರಲಾಗಿದೆ. ಈ ಘಟನೆಗೂ ಹಿಂಜಾವೇಗೂ ಯಾವುದೇ ಸಂಬಂಧವಿಲ್ಲ ಎಂದು ಹಿಂಜಾವೇ ಮಂಗಳೂರು ವಿಭಾಗ ಸಂಚಾಲಕ ರವಿರಾಜ್ ಬಿ.ಸಿ.ರೋಡ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಮೃತ ಪ್ರತಾಪ್ ಪೂಜಾರಿ ಹಾಗೂ ಆತನನ್ನು ಹತ್ಯೆ ಮಾಡಿದವರಾರೂ ಹಿಂಜಾವೇ ಕಾರ್ಯಕರ್ತರಲ್ಲ. ಈ ಘಟನೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಹೆಸರನ್ನು ಹಾಳು ಮಾಡಲು ಷಡ್ಯಂತ್ರ ನಡೆದಿದೆ. ಘಟನೆಗೆ ಸಂಬಂಧಪಟ್ಟಂತೆ ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾಗಿ ಮತ್ತು ಕೂಲಂಕಷವಾಗಿ ತನಿಖೆ ನಡೆಸಬೇಕೆಂದು ಆಗ್ರಹಿಸುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹಿಂಜಾವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಷ್ ಪಡೀಲ್, ಜಿಲ್ಲಾ ಸಂಚಾಲಕ ಅಮಿತ್ ಕುಮಾರ್, ವಿಭಾಗ ಅಧ್ಯಕ್ಷ ಗಣಪತಿ ಬಂಗೇರ, ವಿಭಾಗ ಸಹ ಸಂಚಾಲಕ ರವಿರಾಜ್ ಶೆಟ್ಟಿ ಕಡಬ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News