ಉಚ್ಚಿಲ: ಧಾರ್ಮಿಕ ಕಾರ್ಯಕ್ರಮ
Update: 2017-02-23 18:40 GMT
ಮಂಗಳೂರು, ಫೆ. 23: ಸೋಮೇಶ್ವರ ಉಚ್ಚಿಲದ 407 ಜುಮಾ ಮಸೀದಿ ಆಶ್ರಯದಲ್ಲಿ ಫೆ.23ರಿಂದ 26ರವರೆಗೆ ಮಗ್ರಿಬ್ ನಮಾಝ್ನ ಬಳಿಕ ಮಸೀದಿಯ ವಠಾರದಲ್ಲಿ 33ನೆ ದ್ಸಿಕ್ರ್, ಸ್ವಲಾತ್ ವಾರ್ಷಿಕೋತ್ಸವ ಮತ್ತು ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಗಳಲ್ಲಿ ವಿವಿಧ ಧಾರ್ಮಿಕ ನಾಯಕರು ಭಾಗವಹಿಸಲಿದ್ದಾರೆ.
ಫೆ.24ರಂದು ನಡೆಯುವ ಕಾರ್ಯಕ್ರಮದಲ್ಲಿ ನೂರುಲ್ ಹುದಾ ಮಾಡನ್ನೂರ್ನ ಪ್ರಾಂಶುಪಾಲ ವೌಲಾನ ಅಡ್ವಕೇಟ್ ಹನೀಫ್ ಹುದವಿ ದೇಲಂಪಾಡಿ, 25ರಂದು ತೃಕ್ಕರಿಪುರ ಓಟಪದವು ವೌಲಾನಾ ಹಂಝ ಮಿಸ್ಬಾಹಿ ಹಾಗೂ 26ರಂದು ನಡೆಯುವ ದ್ಸಿಕ್ರ್ ವಾರ್ಷಿಕೋತ್ಸವ ಸಮಾರೋಪದಲ್ಲಿ ಮುಖ್ಯ ಭಾಷಣಕಾರರಾಗಿ ಎಸ್ವೈಎಸ್ ರಾಜ್ಯಾಧ್ಯಕ್ಷ ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್ ಭಾಗವಹಿಸಲಿದ್ದಾರೆ. ಸಚಿವ ಯು.ಟಿ.ಖಾದರ್, ಸಿ.ಎ.ಮಜೀದ್ ಹಾಜಿ ಉಚ್ಚಿಲ, ಮುದರ್ರಿಸ್ ವೌಲಾನಾ ಮುನೀರ್ ಸಖಾಫಿ, ವೌಲಾನಾ ಇಬ್ರಾಹೀಂ ಫೈಝಿ ಉದ್ಯಾವರ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.