ಕೇರಳ ಸಿಎಂಗೆ ಮಂಗಳೂರಿನಲ್ಲಿ ಅದ್ದೂರಿ ಸ್ವಾಗತ
Update: 2017-02-25 18:46 GMT
ಹರತಾಳ, ವಿರೋಧವನ್ನು ಲೆಕ್ಕಿಸದೆ ಶನಿವಾರ ಬೆಳಗ್ಗೆ ಮಂಗಳೂರಿಗೆ ರೈಲಿನ ಮೂಲಕ ಆಗಮಿಸಿದ ಕೇರಳದ ಮುಖ್ಯಮಂತ್ರಿಗೆ ಭಾರೀ ಜನಸಾಗರ ಹಾಗೂ ಬಿಗಿ ಪೊಲೀಸ್ ಬಂದೋಬಸ್ತ್ನ ನಡುವೆ ಅದ್ದೂರಿ ಸ್ವಾಗತ ನೀಡಲಾಯಿತು.
ಮಂಗಳೂರು ಕೇಂದ್ರ ರೈಲ್ವೆ ನಿಲ್ದಾಣಕ್ಕೆ ಬಂದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಸಿಪಿಎಂ ಕಾರ್ಯಕರ್ತರು ಘೋಷಣೆಗಳೊಂದಿಗೆ ಬರಮಾಡಿಕೊಂಡರು. ರೈಲ್ವೆ ನಿಲ್ದಾಣದ ಸುತ್ತಮುತ್ತ ಪೊಲೀಸರ ಸರ್ಪಗಾವಲಿನ ನಡುವೆ, ಡ್ರೋನ್ಗಳ ಕಣ್ಗಾವಲಿನ ಮೂಲಕ ವಿಶೇಷ ನಿಗಾಯಿರಿಸಲಾಗಿತ್ತು.