ನಾಳೆ ತುಳು ಸಿನೆಮಾ ಪ್ರಶಸ್ತಿ ವಿಜೇತರಿಗೆ ಅಭಿನಂದನೆ

Update: 2017-02-25 18:50 GMT

ಪುತ್ತೂರು, ಫೆ.25: ಜಯಕರ್ನಾಟಕ ಕುಂಬ್ರ ವಲಯ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ವತಿಯಿಂದ ಮುಕ್ತ ಟಿವಿ ತುಳು ಸಿನೆಮಾ ಅವಾರ್ಡ್ ವಿಜೇತರಾದ ಶಿವಧ್ವಜ್, ನವೀನ್ ಡಿ. ಪಡೀಲ್, ಸಂತೋಷ್ ರೈ ಪಾತಾಜೆ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ‘ಪನೋಡಾ ಬೋಡ್ಚಾ’ ತುಳು ಸಿನೆಮಾ ಉಚಿತ ಪ್ರದರ್ಶನ ಫೆ.27ರಂದು ಪುತ್ತೂರು ತಾಲೂಕಿನ ಕುಂಬ್ರ ಎಂಬಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮ ಸಂಘಟಕ, ಕಲಾವಿದ ಸುಂದರ್ ರೈ ಮಂದಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸಮಾರಂಭವನ್ನು ತುಳು ಸಾಹಿತ್ಯ ಅಕಾಡಮಿಯ ರಿಜಿಸ್ಟ್ರಾರ್ ಬಿ.ಚಂದ್ರಹಾಸ ರೈ ಉದ್ಘಾಟಿಸಲಿದ್ದಾರೆ. ಜಯಕರ್ನಾಟಕ ಸಂಘಟನೆ ಕುಂಬ್ರ ವಲಯದ ಗೌರವ ಅಧ್ಯಕ್ಷ ಪುರಂದರ ರೈ ಮಿತ್ರಂಪಾಡಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಕುಂಬ್ರ ವಲಯದ ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಕರುಣಾ ರೈ ಬಿಜಳ, ಸಂಚಾಲಕ ಮಾಧವ ರೈ, ಸಾಂಸ್ಕೃತಿಕ ಸಂಘಟಕ ಚಿದಾನಂದ ಕಾಮತ್ ಕಾಸರಗೋಡು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News