×
Ad

ನಿಷೇಧಿತ ಕರೆನ್ಸಿ ಹೊಂದಿದ್ದ ಬಿಜೆಪಿ ಕಾರ್ಪೊರೇಟರ್ ಸೋದರನ ಬಂಧನ

Update: 2017-02-26 23:45 IST

    ಜೈಪುರ, ಫೆ.26: ಇಲ್ಲಿನ ಬಾನಿ ಪಾರ್ಕ್ ಎಂಬಲ್ಲಿ 63.44 ಲಕ್ಷ ರೂ. ಮುಖಬೆಲೆಯ ಅಮಾನ್ಯಗೊಂಡ ಕರೆನ್ಸಿ ನೋಟುಗಳನ್ನು ಹೊಂದಿದ್ದ ಸ್ಥಳೀಯ ಬಿಜೆಪಿ ಕಾರ್ಪೊರೇಟರ್ ಒಬ್ಬರ ಸಹೋದರನನ್ನು ರಾಜಸ್ಥಾನದ ಭಯೋತ್ಪಾದನಾ ನಿಗ್ರಹ ದಳವು ರವಿವಾರ ಬಂಧಿಸಿದೆ.

ಅಮಾನ್ಯಗೊಂಡ ನೋಟುಗಳನ್ನು, ಹೊಸ ಕರೆನ್ಸಿ ನೋಟುಗಳ ಜೊತೆಗೆ ವಿನಿಮಯ ಮಾಡಿಕೊಳ್ಳಲು ಆಗಮಿಸುತ್ತಿದ್ದಾರೆಂಬ ಸುಳಿವು ದೊರೆತ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಪವನ್‌ಶರ್ಮಾನನ್ನು ಬಂಧಿಸಿದರು.
ಆರೋಪಿಯು ಜೈಪುರದ ಬಿಜೆಪಿ ಕಾರ್ಪೊರೇಟರ್ ಮಾನ್ ಪಂಡಿತ್ ಅವರ ಸಹೋ ದರನೆಂದು ವಿಚಾರಣೆಯಿಂದ ತಿಳಿದುಬಂದಿದೆ. ಪ್ರಕರಣದ ತನಿಖೆಯನ್ನು ಭಯೋತ್ಪಾದನಾ ನಿಗ್ರಹದಳಕ್ಕೆ ವರ್ಗಾಯಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News