ಭಾರತೀಯ ಇಂಜಿನಿಯರ್ ಹತ್ಯೆ: ನೂರಾರು ಜನರಿಂದ ಪ್ರಾರ್ಥನೆ

Update: 2017-02-27 15:41 GMT

ವಾಶಿಂಗ್ಟನ್, ಫೆ. 27: ಭಾರತೀಯ ಇಂಜಿನಿಯರ್ ಶ್ರೀನಿವಾಸ ಕುಚ್ಚಿಭೋಟ್ಲ ಅವರ ಹತ್ಯೆ ನಡೆದ ಕ್ಯಾನ್ಸಸ್‌ನಲ್ಲಿ ರವಿವಾರ ನೂರಾರು ಮಂದಿ ಮೆರವಣಿಗೆಯಲ್ಲಿ ಸಾಗಿ ಪ್ರಾರ್ಥನೆ ಸಲ್ಲಿಸಿದರು.

ಬುಧವಾರ ನಡೆದ ಗುಂಡಿನ ದಾಳಿಯಲ್ಲಿ ಶ್ರೀನಿವಾಸ ಮೃತಪಟ್ಟರೆ, ಅವರ ಭಾರತೀಯ ಸ್ನೇಹಿತ ಅಲೋಕ್ ಮದಸನಿ ಗಾಯಗೊಂಡಿದ್ದರು. ದಾಳಿಯನ್ನು ತಡೆಯಲು ಬಂದ ಓರ್ವ ಅಮೆರಿಕನ್ ವ್ಯಕ್ತಿಯೂ ಗಾಯಗೊಂಡಿದ್ದರು.

‘‘ಅವರು ಈಗ ನಮ್ಮಂದಿಗೆ ಇಲ್ಲ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ’’ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಮದಸನಿ ಹೇಳಿದರು.

ಕ್ಯಾನ್ಸಸ್ ನಗರದ ಉಪನಗರದಲ್ಲಿ ನೂರಾರು ನಾಗರಿಕರು ಮೆರವಣಿಗೆಯಲ್ಲಿ ಸಾಗಿದರು.

ಈ ಸಂದರ್ಭದಲ್ಲಿ ದಾಳಿಯನ್ನು ತಡೆಯಲು ಬಂದ ಅಮೆರಿಕದ ಇಯಾನ್ ಗ್ರಿಲಟ್‌ರಿಗೆ ಗೌರವ ಸಲ್ಲಿಸಲಾಯಿತು. ಅವರ ಎದೆ ಮತ್ತು ಕೈಯಲ್ಲಿ ಗುಂಡಿನ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News