ಕಲಾಭವನ್ ಮಣಿಯ ಸಾವು : ಉಪವಾಸ ಸತ್ಯಾಗ್ರಹ ಮುಂದುವರೆಸಿದ ಸಹೋದರ !

Update: 2017-03-06 10:09 GMT

ಚಾಲಕ್ಕುಡಿ,ಮಾ.6: ಕಲಾಭವನ್ ಮಣಿಯ ನಿಗೂಢ ಸಾವಿನ ತನಿಖೆ ಕೊನೆಗೊಳಿಸುವುದನ್ನು ಪ್ರತಿಭಟಿಸಿ ಮಣಿಯ ಸಹೋದರ ಆರ್. ಎಲ್.ವಿ. ರಾಮಕೃಷ್ಣನ್ ನಡೆಸುತ್ತಿರುವ ಅನ್ನಸತ್ಯಾಗ್ರಹವನ್ನು ಮುಂದುವರಿಸಿದ್ದಾರೆ.

ಚಾಲಕ್ಕುಡಿ ಕಲಾಮಂದಿರದಲ್ಲಿ ಕಳೆದ ಎರಡು ದಿವಸಗಳಿಂದ ಅವರು ಅನ್ನಸತ್ಯಾಗ್ರಹ ನಡೆಸುತ್ತಿದ್ದಾರೆ. ರಾಜ್ಯಸರಕಾರ ಯಾವ ಸ್ಪಂದನೆಯೂ ಮಾಡದ್ದರಿಂದ ಸತ್ಯಾಗ್ರಹವನ್ನು ಅನಿಶ್ಚಿತ ಕಾಲಕ್ಕೆ ಮುಂದುವರಿಸಿದ್ದಾರೆ.

ಮಣಿ ಅವರ ಸಾವನ್ನು ಸಹಜ ಸಾವನ್ನಾಗಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆಂದು ಆರ್.ಎಲ್.ವಿ. ರಾಮಕೃಷ್ಣನ್ ಆರೋಪಿಸಿದ್ದಾರೆ. ಆದ್ದರಿಂದಲೇ ಮಣಿಯ ದೇಹದಲ್ಲಿ ವಿಷಾಂಶ ಇದೆಎಂದು ಗೊತ್ತಾಗಿಯೂ ಆಂತರಿಕ ಅವಯವಗಳನ್ನು ರಾಷ್ಟ್ರೀಯ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. ಆದರೆ ಅವಯವಗಳಿಗೆ ಸೀಲು ಹಾಕದೆ ಕಳುಹಿಸಲಾಗಿದೆ.

ಅದನ್ನು ಯಾವ ಕಾರಣದಿಂದ ರಾಷ್ಟ್ರೀಯ ಪ್ರಯೋಗಾಲಯ ಸ್ವೀಕರಿಸಿತೆಂದು ಅವರು ಪ್ರಶ್ನಿಸಿದರು. ಅಮೃತ ಆಸ್ಪತ್ರೆಯಲ್ಲಿದ್ದ ಸಮಯದಲ್ಲಿ ಶರೀರದಲ್ಲಿ ವಿಷಾಂಶ ಇರುವುದು ಪತ್ತೆಯಾಗಿತ್ತು. ಆದರೆ ಪಿತ್ತ ಕಾಮಾಲೆ ರೋಗ ಸಾವಿಗೆ ಕಾರಣ ಎಂದು ವರದಿಯಲ್ಲಿ ಬರೆಯಲಾಗಿತ್ತು. ಕುಟುಂಬಸದಸ್ಯರು ಹೇಳದ ವಿಷಯಗಳನ್ನು ಆರೋಪಿಗಳಿಗೆ ಅನುಕೂಲವಾಗಿ ಪೊಲೀಸ್ ದಾಖಲಿಸಿದ್ದಾರೆ. ಈ ಎಲ್ಲ ವಿಷಯಗಳಲ್ಲಿ ಸ್ಪಷ್ಟ ಚಿತ್ರಣ ಲಭಿಸುವವರೆಗೂ ನಿರಾಹಾರ ಸತ್ಯಾಗ್ರಹವನ್ನು ಮುಂದುವರಿಸುವುದಾಗಿ ರಾಮಕೃಷ್ಣನ್ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News