ನಾಳೆ ತುರವೇ ಮಂಗಳೂರು ಕ್ಷೇತ್ರ ಕಚೇರಿ ಉದ್ಘಾಟನೆ

Update: 2017-03-15 18:57 GMT

ಉಳ್ಳಾಲ, ಮಾ.15: ತುಳುನಾಡ ರಕ್ಷಣಾ ವೇದಿಕೆಯ ಮಂಗಳೂರು ವಿಧಾನಸಭಾ ಕ್ಷೇತ್ರದ ಕಚೇರಿ ಉದ್ಘಾಟನೆ, ನೂತನವಾಗಿ ಆಯ್ಕೆಯಾದ ಪದಾಕಾರಿಗಳ ಪದಗ್ರಹಣ, ಸಂಘಟಿತ ಕಾರ್ಮಿಕರಿಗೆ ವಿಮಾಕಾರ್ಡ್ ವಿತರಣಾ ಕಾರ್ಯಕ್ರಮವು ಮಾ.17ರಂದು 4ಕ್ಕೆ ದೇರಳಕಟ್ಟೆಯಲ್ಲಿ ನಡೆಯಲಿದೆ ಎಂದು ತುಳುನಾಡು ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಸುದ್ದಿಗೋಷ್ಠಿಯಲ್ಲಿಂದು ಹೇಳಿದ್ದಾರೆ.

ಕಾರ್ಯಕ್ರಮವನ್ನು ರವಿಶೆಂಕರ್ ಶೆಟ್ಟಿ ಬೆಂಗಳೂರು ಉದ್ಘಾಟಿಸಲಿದ್ದು, ಮಂಗಳೂರು ವಿಭಾಗದ ಕಾರ್ಮಿಕ ಆಯುಕ್ತ ಕೆ.ಬಿ.ನಾಗರಾಜು ಕಾರ್ಡ್ ವಿತರಣೆ ಮಾಡುವರು. ಕಣಚೂರು ಮೋನು, ಸಂತೋಷ್ ಕುಮಾರ್ ಬೋಳಿಯಾರ್, ರವೀಂದ್ರ ಶೆಟ್ಟಿ ಉಳಿದೊಟ್ಟು, ಮುನೀರ್ ಬಾವಾ, ಹರಿಕೃಷ್ಣ ಪುನರೂರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಶಾಂತ್ ಭಟ್ ಕಡಬ, ಅಬ್ದುಲ್ ರಶೀದ್ ಜೆಪ್ಪು, ಸಿರಾಜ್ ಅಡ್ಕರೆ, ರಾಜೇಶ್ ಕುತ್ತಾರ್, ವಿದ್ಯಾ ಯು.ಜೋಗಿ, ರವಿ ಶೆಟ್ಟಿ ಮಾಡೂರು, ರಹೀಮ್ ಕುತ್ತಾರ್, ಇಸ್ಮಾಯೀಲ್ ಶಾಫಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News