ಇಂದು ತಿರುಮಲೇಶ್‌ರಿಂದ ಉಪನ್ಯಾಸ

Update: 2017-03-22 18:36 GMT

ಉಡುಪಿ, ಮಾ.22: ನಾಡಿನ ಖ್ಯಾತ ಕವಿ, ಲೇಖಕ ಡಾ.ಕೆ.ವಿ.ತಿರುಮಲೇಶ್ ಇವರಿಂದ ‘ಯಕ್ಷಗಾನ ತಾಳಮದ್ದಲೆಯ ಜೊತೆಗಿನ ಹುಟ್ಟೂರ ನೆನಪುಗಳು’ ವಿಷಯ ಕುರಿತ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮವು ಮಾ.23ರಂದು ಸಂಜೆ 5:30ಕ್ಕೆ ಉಡುಪಿ ಯಕ್ಷಗಾನ ಕಲಾರಂಗದ ವತಿಯಿಂದ ಕಲಾರಂಗದ ಕಚೇರಿಯಲ್ಲಿ ನಡೆಯಲಿದೆ.

 ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಮ್ಮನ್ನಗಲಿದ ಕರಾವಳಿ ಕರ್ನಾಟಕದ ಸಾಂಸ್ಕೃತಿಕ ಹರಿಕಾರ ವಿಜಯನಾಥ ಶೆಣೈ ಅವರಿಗೆ ನುಡಿನಮನ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ ಡಾ.ಕೆ.ಪಿ. ರಾವ್ ‘ದೇಶ-ಭಾಷೆ’ ವಿಷಯದ ಕುರಿತು ಸಂವಾದ ನಡೆಸಿಕೊಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News