ಬಿಜೆಪಿಗಾಗಿ ಕೆಲಸ ಮಾಡಿರುವ ಉವೈಸಿ ಮಾತನಾಡಲಿ : ಆಝಂ ಖಾನ್

Update: 2017-03-23 05:46 GMT

ಆಲಾಹಾಬಾದ್,ಮಾ.22 :  ಅಯೋಧ್ಯೆ ವಿವಾದವನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಿ ಎಂಬ ಸುಪ್ರೀಂಕೋರ್ಟಿನ ಸಲಹೆಯನ್ನು ' ಉತ್ತಮ ಹೆಜ್ಜೆ ' ಎಂದು ಪರೋಕ್ಷವಾಗಿ ಟೀಕಿಸಿರುವ ಮಾಜಿ ಸಚಿವ , ಸಮಾಜವಾದಿ ಪಕ್ಷದ ಮುಖಂಡ ಆಝಂ ಖಾನ್ ಅವರು ಹೈದರಾಬಾದ್ ಸಂಸದ ಅಸಾದುದ್ದೀನ್ ಉವೈಸಿ ಬಿಜೆಪಿಗಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.  

ಈ ವಿಷಯವನ್ನು ಧಾರ್ಮಿಕ ಜನರೇ ಆರಂಭಿಸಿದ್ದಾರೆ. ಇದು ಅವರ ಕೈಯಲ್ಲೇ ಪರಿಹಾರ ಆಗಲು ಸಾಧ್ಯವಿದೆ. ಈ ವಿಷಯದಲ್ಲಿ ಉಲೇಮಾ ಕೌನ್ಸಿಲ್ , ದಿಲ್ಲಿ ಜಾಮಾ ಮಸೀದಿ ಶಾಹಿ ಇಮಾಮ್ ಅಹ್ಮದ್ ಬುಖಾರಿಯವರೊಡನೆ ಚರ್ಚಿಸಬೇಕಾಗಿದೆ. ಈ ವಿಷಯದಲ್ಲಿ ರಾಜಿ ಏರ್ಪಡಿಸಲು ಅವರು ಸಮರ್ಥರಿದ್ದಾರೆ . ಹೈದರಾಬಾದ್‌ನ ದೊಡ್ಡ ನಾಯಕ ಮತ್ತು ಮುಸ್ಲಿಮರ ವಕ್ತಾರ ಮೌಲಾನಾ ಅಸದುದ್ದೀನ್ ಉವೈಸಿರವರು ಮುಖ್ಯಮಂತ್ರಿ ಆದಿತ್ಯನಾಥ್ ಜೊತೆ ಚರ್ಚಿಸಬೇಕು. ಅವರು ಕೂಡಾ ಈ ವಿಷಯದಲ್ಲಿ ಒಮ್ಮತವನ್ನು ಮೂಡಿಸಲು ಸಮರ್ಥರು. ಏಕೆಂದರೆ ಈಗ ಭಾರತದಲ್ಲಿ ಅವರೇ ಮುಸ್ಲಿಮರ ನಾಯಕರು. ಅವರನ್ನೇ ಬಿಜೆಪಿ ಮುಸ್ಲಿಂ ನಾಯಕರೆಂದು ಗುರುತಿಸುತ್ತದೆ. ಬಿಜೆಪಿ ಜೊತೆಗೆ ಅವರು ಚೆನ್ನಾಗಿಯೂ ಇದ್ದಾರೆ. ಅದಕ್ಕಾಗಿ ಕೆಲಸವನ್ನೂ ಮಾಡಿದ್ದಾರೆ ಎಂದು ಆಝಂ ಖಾನ್  ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News