ಮುಸ್ಲಿಮರೂ ಹಿಂದೂಗಳ ವಂಶಜರು: ಇಬ್ಬರೂ ಸೇರಿ ರಾಮಮಂದಿರ ಕಟ್ಟೋಣ- ಗಿರಿರಾಜ್ ಸಿಂಗ್

Update: 2017-03-27 11:34 GMT

 ಹೊಸದಿಲ್ಲಿ,ಮಾ. 27: ಕೇಂದ್ರಸಚಿವ ಹಾಗೂ ಬಿಜೆಪಿ ಸಂಸದ ಗಿರಿರಾಜ್ ಸಿಂಗ್‌ರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಗೊಳ್ಳಲಿದೆ ಎನ್ನುವುದನ್ನು ಮತ್ತೊಮ್ಮೆ ಹೇಳಿದ್ದಾರೆ. ಈ ಬಾರಿ ಅವರು, ಹಿಂದೂಗಳ ಮತ್ತುಮುಸ್ಲಿಮರ ಡಿಎನ್‌ಎ ಒಂದೇ ಆಗಿದ್ದು, ಆದ್ದರಿಂದ ನಾವು ಒಟ್ಟಗೆ ಸೇರಿ ರಾಮಮಂದಿರವನ್ನು ಕಟ್ಟೋಣ ಎಂದು ಸಲಹೆ ನೀಡಿದ್ದಾರೆ. ಅದೇವೇಳೆ ಗಿರಿರಾಜ್‌ಸಿಂಗ್ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗುವುದಂತೂ ಶೇ. 200ರಷ್ಟು ಖಚಿತ ಎಂದಿದ್ದಾರೆ.

 ನಾವು ಮತ್ತುಮುಸ್ಲಿಮರು ಸೇರಿಯೇ ರಾಮಮಂದಿರ ಕಟ್ಟುತ್ತೇವೆ. ಯಾಕೆಂದರೆ ಮುಸ್ಲಿಮರು ನಮ್ಮದೇ ವಂಶಜರು. ಅವರ ಮತ್ತು ನಮ್ಮ ಧರ್ಮ ಮಾತ್ರ ಬೇರೆ ಬೇರೆಯಾಗಿದೆ. ಆರಾಧನೆ ಕೂಡಾ ಬೇರೆ ಬೇರೆಯಾಗಿದೆ. ಆದರೆ ನಮ್ಮಿಬ್ಬರ ಪೂರ್ವಜರು ಒಂದೇ ಎಂದು ಅವರು ಹೇಳಿದರು. ರಾಮ ಮಂದಿರದಲ್ಲಿ ಮುಸ್ಲಿಮರಿಗೂ ನಂಬಿಕೆ ಇದೆ. ಆದ್ದರಿಂದ ನಮ್ಮ ಪೂರ್ವಜರ ನೆನಪಿನಲ್ಲಿ ಒಟ್ಟುಸೇರಿ ಮಂದಿರ ಕಟ್ಟೋಣ ಎಂದು ಗಿರಿರಾಜ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದರು. ಕಸಾಯಿಖಾನೆಯ ವಿಷಯವನ್ನು ಪ್ರಸ್ತಾಪಿಸಿದ ಅವರು ಉತ್ತರ ಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆಗಳನ್ನು ಬಂದ್ ಮಾಡಲಾಗಿದೆಯೇ ಹೊರತು ಸರಕಾರ ಮಾಂಸತಿನ್ನುವುದಕ್ಕೆ ನಿಷೇಧ ಹೇರಿಲ್ಲ ಎಂದು ಹೇಳಿದ್ದಾರೆ.

ಸಾಕ್ಷಿ ಮಹಾರಾಜ್ ಬೆಂಬಲ:

ಗಿರಿರಾಜ್ ಸಿಂಗ್‌ರ ಹೇಳಿಕೆಯನ್ನು ಬೆಂಬಲಿಸಿ ಮಾತಾಡಿದ ಬಿಜೆಪಿ ಸಂಸದ ಸಾಕ್ಷಿಮಹಾರಾಜ್‌ರು "ಸುಪ್ರೀಂಕೋರ್ಟು ಕೂಡಾ ಹಿಂದೂ ಮತ್ತು ಮುಸ್ಲಿಮರು ಒಟ್ಟುಸೇರಿ ಮಂದಿರ ಕಟ್ಟಬೇಕೆಂದು ಹೇಳುತ್ತಿದೆ. ನಾವೆಲ್ಲರೂ ಸಹೋದರರು ಆಗಿದ್ದೇವೆ. ಮತ್ತು ಹಿಂದೂ ಮುಸ್ಲಿಮ್ ಸೇರಿ ರಾಮ ಮಂದಿರ ನಿರ್ಮಿಸೋಣ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News