ಡಾ. ಕುರಿಯನ್ ಭಾವಚಿತ್ರ ಅಳವಡಿಸಿ

Update: 2017-04-18 18:37 GMT

ಮಾನ್ಯರೆ,

ಭಾರತದಲ್ಲಿ ಕ್ಷೀರಕ್ರಾಂತಿಯ ಮೂಲಕ ದೇಶದ ಕೋಟ್ಯಂತರ ಜನರ ಬದುಕಿಗೆ ಆರ್ಥಿಕ ನೆಲೆ ಒದಗಿಸಿದವರು ಡಾ.ಕುರಿಯನ್. ಇಂತಹ ಸಾಧಕ ಡಾ.ಕುರಿಯನ್‌ರವರ ಭಾವಚಿತ್ರವನ್ನು ಕಡ್ಡಾಯವಾಗಿ ನಂದಿನಿ ಮಳಿಗೆಗಳಲ್ಲಿ ಅಳವಡಿಸುವುದರ ಮೂಲಕ ಅವರ ಸೇವೆಗೆ ಕೃತಜ್ಞತೆ ಸೂಚಿಸುವ ಕೆಲಸವನ್ನು ಕರ್ನಾಟಕ ರಾಜ್ಯ ಮಿಲ್ಕ್ ಫೆಡರೇಶನ್ ಮಾಡಬೇಕಾಗಿದೆ.

ರಾಜ್ಯದ ಕೆಲವು ಮಳಿಗೆಗಳಲ್ಲಿ ಡಾ.ಕುರಿಯನ್ ಹಾಗೂ ಕರ್ನಾಟಕದಲ್ಲಿ ಕ್ಷೀರಕ್ರಾಂತಿಗೆ ಕಾರಣಕರ್ತರಾದ ಮಾಜಿ ಸಚಿವ ದಿ. ಎಂ.ವಿ.ಕೃಷ್ಣಪ್ಪನವರ ಭಾವಚಿತ್ರವನ್ನು ಅಳವಡಿಸಿ ದೊಡ್ಡತನವನ್ನು ಮೆರೆದಿದ್ದಾರೆ. ಈ ಮೇಲ್ಪಂಕ್ತಿಯನ್ನು ಎಲ್ಲ ನಂದಿನಿ ಮಳಿಗೆಗಳಲ್ಲೂ ಅನುಸರಿಸಿದರೆ ದೇಶಕ್ಕೆ ಮಹತ್ತರ ಕೊಡುಗೆ ನೀಡಿದ ಈ ಮಹನೀಯರ ಸಾಧನೆಯನ್ನು ಸ್ಮರಿಸಿದಂತಾಗುತ್ತದೆ. ಕರ್ನಾಟಕ ರಾಜ್ಯ ಮಿಲ್ಕ್ ಫೆಡರೇಶನ್ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟೀತೇ?

Similar News