ಎ.25ರಂದು ಅಹ್ಸನಿಗಳ ಸಂಗಮ ಕಾರ್ಯಕ್ರಮ

Update: 2017-04-24 18:36 GMT

ಕಾಸರಗೋಡು, ಎ.24: ಮಂಜನಾಡಿ ಅಲ್ ಮದೀನಃ ಕ್ಯಾಂಪಸ್ ನಲ್ಲಿ ಕರ್ನಾಟಕ ರಾಜ್ಯ ಅಹ್ಸನಿಗಳ ಮತ್ತು ಕಾಸರಗೋಡು ಜಿಲ್ಲಾ ಅಹ್ಸನಿಗಳ ಸಂಗಮ ಎ.25ರಂದು 10 ಗಂಟೆಗೆ ನಡೆಯಲಿದೆ.

ಜಾಮಿಅಃ ಇಹ್ಯಾಉಸ್ಸುನ್ನಃ ಇದರ ಉಪ ಪ್ರಾಂಶುಪಾಲ ಫಳಲುರ್ರಹ್ಮಾನ್ ಅಹ್ಸನಿ ಉಸ್ತಾದ್, ಅಬ್ದುಲ್ಲ ಅಹ್ಸನಿ ಉಸ್ತಾದ್, ಕೇರಳ ಅಹ್ಸನೀಸ್ ಇದರ ಪ್ರಮುಖ ನಾಯಕ ಮಂಬಿದಿ ಅಹ್ಸನಿ ಉಸ್ತಾದ್ ಹಾಗೂ ಅಬ್ದುಲ್ ಹಮೀದ್ ಅಹ್ಸನಿ ಉಸ್ತಾದ್ ಭಾಗವಹಿಸಲಿರುವರು ಎಂದು ಕರ್ನಾಟಕ ಅಹ್ಸನೀಸ್ ಅಧ್ಯಕ್ಷ ಬಶೀರ್ ಅಹ್ಸನಿ ತೋಡಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News