ಎ.29: ಗೋಪಾಲಕೃಷ್ಣ ದೇವಳದ ಪ್ರತಿಷ್ಠಾ ವಾರ್ಷಿಕ ಮಹೋತ್ಸವ

Update: 2017-04-25 18:30 GMT

ಮಂಗಳೂರು, ಎ.25: ಶಕ್ತಿನಗರದಲ್ಲಿರುವ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಎ.29ರಂದು ಪ್ರತಿಷ್ಠಾ ವಾರ್ಷಿಕ ಮಹೋತ್ಸವವು ಲೋಕ ಕಲ್ಯಾಣಾರ್ಥವಾಗಿ ವಿಶೇಷ ಸಿಯಾಳಾಭಿಷೇಕ, ಮಹಾಗಣಪತಿ ಹವನ, ಚಂಡಿಕಾ ಹವನದೊಂದಿಗೆ ನಡೆಯಲಿದೆ.

 ವೇ.ಮೂ. ಬ್ರಹ್ಮಶ್ರೀ ಆರಿಕ್ಕಾಡಿ ನಾರಾಯಣ ದೇವಪೂಜಿತ್ತಾಯ ನೇತೃತ್ವ ವಹಿಸುವರು. ಎ.28ರಂದು ಬೆಳಗ್ಗೆಯಿಂದ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ಜರಗಲಿದೆ. ಸಂಜೆ 5:30ರಿಂದ ಚಕ್ರವರ್ತಿ ಸೂಲಿಬೆಲೆ ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್, ನಗರದ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನರೇಂದ್ರ ಎಲ್. ನಾಯಕ್ ಭಾಗವಹಿಸಲಿದ್ದಾರೆ. ಬಳಿಕ ನೃತ್ಯಾರಾಧನ - ವಿದುಷಿ ವಿನುತಾ ಲಕ್ಷ್ಮೀಕಾಂತರ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ನೃತ್ಯ ನಡೆಯಲಿದೆ. ಎ.29ರಂದು ಬೆಳಗ್ಗೆ ಲೋಕ ಕಲ್ಯಾಣಾರ್ಥ ಸಿಯಾಳಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4ರಿಂದ ಶ್ರೀ ಕ್ಷೇತ್ರದ ಭಜನಾ ತರಗತಿ ವಿದ್ಯಾರ್ಥಿಗಳಿಂದ ಭಕ್ತಿ ಸೌರಭ ಕಾರ್ಯಕ್ರಮ, ಬಳಿಕ ಚಿನ್ಮಯಿ, ಶಕ್ತಿ ನಗರ ಇವರಿಂದ ಭಕ್ತಿ ರಸಮಂಜರಿ , ಸಂಜೆ 6ರಿಂದ ಇರುವೈಲು ಶ್ರೀ ದುರ್ಗಾ ಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಗರುಡ ಗರ್ವಭಂಗ ಯಕ್ಷಗಾನ ಬಯಲಾಟ ನಡೆಯಲಿದೆ. ಈ ವೇಳೆ ಐ. ಕುಮಾರ ಶೆಟ್ಟಿಯವರಿಗೆ ದಿವಾಣ ಭೀಮ ಭಟ್ಟ ಪ್ರತಿಷ್ಠಾನದ ವತಿಯಿಂದ ಸನ್ಮಾನ ನಡೆಯಲಿದೆ. ರಾತ್ರಿ 8ರಿಂದ ಮಹಾಸೇವೆ ರಂಗಪೂಜೆ, ಪ್ರಸಾದ ವಿತರಣೆ ನಡೆಯಲಿದೆ ಎಂದು ದೇವಳದ ಆಡಳಿತ ಮೊಕ್ತೇಸರ ಕೆ.ಸಿ.ನಾಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News