‘ಮಾಸ್ತಿ’ ಪ್ರಶಸ್ತಿಗೆ ಪ್ರೊ.ನಾಯಕ್, ಪ್ರೊ.ಗಿರಡ್ಡಿ, ಪ್ರೊ.ಮಿತ್ರ, ನೀಳಾದೇವಿ ಆಯ್ಕೆ

Update: 2017-04-29 15:00 GMT

ಬೆಂಗಳೂರು, ಎ. 29: ಪ್ರಸಕ್ತ ಸಾಲಿನ ಪ್ರತಿಷ್ಠಿತ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಪ್ರಶಸ್ತಿಗೆ ಹಿರಿಯ ಸಾಹಿತಿಗಳಾದ ಪ್ರೊ.ಜಿ.ಎಚ್.ನಾಯಕ್, ಪ್ರೊ. ಅ.ರಾ.ಮಿತ್ರ, ಪ್ರೊ.ಗಿರಡ್ಡಿ ಗೋವಿಂದರಾಜು, ನೀಳಾದೇವಿ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು 25 ಸಾವಿರ ರೂ.ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ. ಜೂನ್‌ನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಮಾವಿನಕೆರೆ ರಂಗನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News