ಬಾಬಾ ರಾಮದೇವ್ ರ ಉಡುಗೊರೆಗೆ ಮುಗಿಬಿದ್ದ ಪತ್ರಕರ್ತರು !

Update: 2017-05-04 14:52 GMT

ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಹರಿದ್ವಾರದಲ್ಲಿ ಬಾಬಾ ರಾಮದೇವ್ ಅವರ ಪತಂಜಲಿ ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿದರು. ಅದರ ಬೆನ್ನಿಗೇ , ಗುರುವಾರ ದಿಲ್ಲಿಯ ಕಾಂಸ್ಟಿಟ್ಯೂಷನಲ್ ಕ್ಲಬ್ ನಲ್ಲಿ ಪತಂಜಲಿಯ ವಾರ್ಷಿಕ ಪತ್ರಿಕಾ ಗೋಷ್ಠಿ ಆಯೋಜಿಸಲಾಗಿತ್ತು. ಇದರಲ್ಲಿ ಬಾಬಾ ಹಾಗು ಉದ್ಯಮಿ ಎರಡೂ ಆಗಿರುವ ರಾಮದೇವ್ ಅವರು ಕಳೆದ ಆರ್ಥಿಕ ವರ್ಷದಲ್ಲಿ ಪತಂಜಲಿಯ ಬೆಳವಣಿಗೆಯ ವಿವರಗಳನ್ನು ನೀಡಿದರು. ಜೊತೆಗೆ ಭವಿಷ್ಯದ " ಭಾರೀ ಯೋಜನೆಗಳನ್ನು" , " ಗುರಿ" ಗಳನ್ನು ಪ್ರಕಟಿಸಿದರು.

ಆದರೆ ವಿಶೇಷ ಇದಲ್ಲ. ಪತ್ರಿಕಾಗೋಷ್ಠಿ ನಡೆದ ಮೇಲೆ ನಡೆದಿದ್ದು ನಿಜಕ್ಕೂ ಅತ್ಯಂತ ತಮಾಷೆಯಾಗಿತ್ತು. ಮೀಡಿಯಾ ಕಿಟ್ ಹೆಸರಲ್ಲಿ ಪತಂಜಲಿ ನೀಡುವ ಉಡುಗೊರೆ ಪ್ಯಾಕೆಟ್ ಗಳನ್ನು ತೆಗೆದುಕೊಳ್ಳಲು ಪತ್ರಕರ್ತರು ಮುಗಿಬಿದ್ದರು. ಇದನ್ನು ಇನ್ನೋರ್ವ ಪತ್ರಕರ್ತನೇ ( ಇಂಡಿಯನ್ ಎಕ್ಸ್ ಪ್ರೆಸ್ ನ ದೀಪಕ್ ಪಟೇಲ್ ) ಚಿತ್ರೀಕರಿಸಿ ವೀಡಿಯೊವನ್ನು ಟ್ವೀಟ್ ಮಾಡಿದರು.  ಕಾರ್ಪೊರೇಟ್ ಸಂಸ್ಥೆಗಳು ಪತ್ರಿಕಾಗೋಷ್ಠಿಯ ಬಳಿಕ ಹೀಗೆ ಉಡುಗೊರೆ ನೀಡುವುದು ಮಾಮೂಲಿ. ಆದರೆ ರಾಜಧಾನಿಯ ಪತ್ರಕರ್ತರು ಅದನ್ನು ಪಡೆಯಲು ಈ ರೀತಿ ಸ್ಪರ್ಧೆಗೆ ಬಿದ್ದಿದ್ದು ಮಾತ್ರ ಪರಿಸ್ಥಿತಿಗೆ ಹಿಡಿದ ಕನ್ನಡಿಯಂತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News