ಎನ್‌ಡಿಆರ್‌ಎಫ್‌ನಿಂದ ಅಣಕು ಪ್ರದರ್ಶನ

Update: 2017-05-04 18:33 GMT

ಮಂಗಳೂರು, ಮೇ 4: ಮಂಗಳೂರು ಪೊಲೀಸ್ ಪೆರೇಡ್ ಮೈದಾನದಲ್ಲಿ ಆಂಧ್ರಪ್ರದೇಶ ರಾಜ್ಯದಿಂದ ಒಟ್ಟು 35 ಜನರ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಆಗಮಿಸಿ ಅಣುಕು ಪ್ರದರ್ಶನ ನೀಡಿತು. ತಂಡದ ಟೀಮ್ ಕಮಾಂಡರ್ ರಸೂಲ್ ನೇತೃತ್ವದಲ್ಲಿ ಎನ್‌ಡಿಆರ್‌ಎಫ್‌ನ ಸಬ್ ಇನ್ಸ್ ಪೆಕ್ಟರ್‌ಗಳಾದ ಮನೋಹರ್ ಹಾಗೂ ಜಾವೇದ್ ನೇತೃತ್ವದಲ್ಲಿ ವಾಹನಗಳ ಅಪಘಾತ ಸಮಯದಲ್ಲಿ ರಕ್ಷಣೆ, ಪ್ರಕೃತಿ ವಿಕೋಪ, ಬಾಂಬ್ ಸಿಡಿತ, ಬೆಂಕಿ ಅಪಘಾತದ ಮತ್ತು ಬಿಲ್ಡಿಂಗ್ ಕುಸಿತದ ಸಂದರ್ಭದಲ್ಲಿ ಜನರನ್ನು ರಕ್ಷಿಸುವ ಬಗ್ಗೆ ಅಣಕು ಪ್ರದರ್ಶನವನ್ನು ಜಿಲ್ಲಾ ಗೃಹರಕ್ಷಕ ದಳದ 100 ಸದಸ್ಯರಿಗೆ ಮತ್ತು ಜಿಲ್ಲಾ ಪೊಲೀಸ್ ತರಬೇತಿ ಪಡೆಯುತ್ತಿರುವ ಸದಸ್ಯರಿಗೆ ನೀಡಿದರು.

    

ಈ ಸಂದರ್ಭದಲ್ಲಿ ಆಂದ್ರಪ್ರದೇಶದ ಎನ್‌ಡಿಆರ್‌ಎಫ್‌ನ ಕಮಾಂಡೆಂಟ್ ಸಾರ್ವಜನಿಕರ ರಕ್ಷಣೆಯ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಮುರಳಿ ಮೋಹನ್ ಚೂಂತಾರು ಎನ್‌ಡಿಆರ್‌ಎಫ್ ಬಗ್ಗೆ ಮಾಹಿತಿ ನೀಡಿದರು.

ಉಪ ಸಮಾದೇಷ್ಟ ರಮೇಶ್ ಸ್ವಾಗತಿಸಿದರು. ಸ್ಟಾಫ್ ಆಫೀಸರ್ ಉಷಾ, ಸಶಸ್ತ್ರ ಮೀಸಲು ಪಡೆಯ ಪೊಲೀಸ್ ನಿರೀಕ್ಷಕ ಗಣೇಶ್ ಮತ್ತು ಮಂಗಳೂರು ಘಟಕದ ಅಧಿಕಾರಿಗಳು, ಗೃಹರಕ್ಷಕರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News