×
Ad

ಅಮರಣಾಂತ ಉಪವಾಸ ನಿರತ ಮಾಜಿ ಸಚಿವ ಕಪಿಲ್‌ ಮಿಶ್ರಾ ಮೇಲೆ ಹಲ್ಲೆ

Update: 2017-05-10 17:57 IST

ಹೊಸದಿಲ್ಲಿ, ಮೇ 10: ದಿಲ್ಲಿಯ ಮುಖ್ಯ ಮಂತ್ರಿ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಆರೋಪಗಳಿಗೆ ಸಂಬಂಧಿಸಿ ಸಿಬಿಐ ತನಿಖೆಗೆ ಒತ್ತಾಯಿಸಿ ದಿಲ್ಲಿಯಲ್ಲಿ ಅಮರಣಾಂತಉಪವಾಸ ಆರಂಭಿಸಿರುವ  ಮಾಜಿ ಸಚಿವ ಕಪಿಲ್‌ ಮಿಶ್ರಾ ಮೇಲೆ ಅಪರಿಚಿತನೊಬ್ಬ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.
ಕಪಿಲ್‌ ಮಿಶ್ರಾ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
 ಮುಖ್ಯ ಮಂತ್ರಿ ಅರವಿಂದ ಕೇಜ್ರಿವಾಲ್‌ ಲಂಚ ಪಡೆದಿದ್ದಾರೆಂದು ಆರೋಪಿಸಿ ಪಕ್ಷದಿಂದ  ಅಮಾನತುಗೊಂಡಿರುವ ಮಾಜಿ ಸಚಿವ   ಕಪಿಲ್‌ ಮಿಶ್ರಾ ಇಂದು ಬೆಳಗ್ಗೆ ಅಮರಣಾಂತ ಉಪವಾಸ ಸತ್ಯಾಗ್ರಹ  ಆರಂಭಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News