‘ದೇವಮಾನವ’ನಿಂದ ಮಹಿಳೆಯ ಮೇಲೆ ಅತ್ಯಾಚಾರ

Update: 2017-05-12 14:19 GMT

ಮುಂಬೈ,ಮೇ 12: ಪಾಲ್ಘರ್‌ನಲ್ಲಿ 20ರ ಹರೆಯದ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ, ಆಕೆಯ ಮೇಲೆ ಅತ್ಯಾಚಾರವೆಸಗಿರುವ ಸ್ವಘೋಷಿತ ‘ದೇವಮಾನವ’ನಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಯುವತಿಗೆ ಉದ್ಯೋಗದ ಆಮಿಷವೊಡ್ಡಿದ್ದ ತೃಯಂಬಕಮುನಿ ಮಂಗಳಮುನಿ ದಾಸ್, ಆಕೆ ಶಾಪಪೀಡಿತಳಾಗಿದ್ದಾಳೆ ಮತ್ತು ತಾನು ಮಾತ್ರ ಆಕೆಯನ್ನು ಗುಣಪಡಿಸಬಲ್ಲೆ ಎಂದು ಹೇಳಿಕೊಂಡಿದ್ದ. ಮೂಲವ್ಯಾಧಿಗೆ ಚಿಕಿತ್ಸೆ ಪಡೆದುಕೊಳ್ಳಲು ಯುವತಿ ವಿಕ್ರಮಗಢದ ಕುಡೇದ್ ಗ್ರಾಮದಲ್ಲಿರುವ ದಾಸ್‌ನ ಆಶ್ರಮದಲ್ಲಿ ಆತನನ್ನು ಭೇಟಿಯಾಗಿದ್ದಳು. ತಾನು ರೋಗವನ್ನು ಗುಣಪಡಿಸುತ್ತೇನೆ, ಮದುವೆ ಗಂಡು ಹುಡುಕಿಕೊಡುತ್ತೇನೆ ಮತ್ತು ಗುಜರಾತಿನ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಉದ್ಯೋಗವನ್ನೂ ಕೊಡಿಸುತ್ತೇನೆ ಎಂದು ದಾಸ್ ಆಕೆಗೆ ಭರವಸೆ ನೀಡಿದ್ದ ಎಂದು ಪೊಲೀಸರು ತಿಳಿಸಿದರು.

ಯುವತಿಯನ್ನು ಅಪಹರಿಸಿದ್ದ ದಾಸ್ ಆಕೆಯನ್ನು ಗುಜರಾತ್‌ನ ಭಿಲಾಡ್‌ಗೆ ಕರೆದೊಯ್ದು ಅನ್ನಾಹಾರವನ್ನೂ ನೀಡದೇ ಐದು ದಿನಗಳ ಕಾಲ ಕೋಣೆಯೊಂದರಲ್ಲಿ ಕೂಡಿ ಹಾಕಿದ್ದ ಮತ್ತು ಪದೇಪದೇ ಆಕೆಯ ಮೆಲೆ ಅತ್ಯಾಚಾರವೆಸಗಿದ್ದ. ‘‘ದುಷ್ಟ ಶಕ್ತಿಯು ನಿನ್ನನ್ನು ಆವರಿಸಿಕೊಂಡಿದೆ ’’ ಎಂದು ಯುವತಿಯನ್ನು ಬೆದರಿಸಿದ್ದ ದಾಸ್,‘‘ನಿನ್ನ ಮೇಲೆ ಅತ್ಯಾಚಾರ ನಡೆಸಿದರೆ ‘ಶುದ್ಧೀಕರಣ ಪ್ರಕ್ರಿಯೆ’ಯು ದುಷ್ಟಶಕ್ತಿಯನ್ನು ನಿವಾರಿಸುತ್ತದೆ’’ ಎಂದು ಹೇಳಿದ್ದ ಎಂದು ಪೊಲೀಸರು ತಿಳಿಸಿದರು.

ಯುವತಿ ಅಕ್ರಮ ಬಂಧನದಿಂದ ತಪ್ಪಿಸಿಕೊಂಡು ಬಂದು ಪೊಲೀಸರಲ್ಲಿ ದೂರು ದಾಖಲಿಸಿದ್ದಾಳೆ. ಈ ಅಕೃತ್ಯದಲ್ಲಿ ದಾಸ್‌ಗೆ ನೆರವಾಗಿದ್ದ ಮೂವರನ್ನು ಪೊಲೀಸರು ಬಂಧಿಸಿ ದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News