ಇಂದು ಕೇರಳದಲ್ಲಿ ಪೆಟ್ರೋಲ್ ಬಂಕ್ ಬಂದ್
Update: 2017-05-14 05:54 GMT
ಕೊಚ್ಚಿ,ಮೇ 14: ಕಮಿಶನ್ ಹೆಚ್ಚಳ ಇತ್ಯಾದಿ ಸುಧಾರಣೆಗಳನ್ನು ಮುಂದಿಟ್ಟ ಅಪೂರ್ವ ಚಂದ್ರ ಆಯೋಗ ವರದಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಆಲ್ ಕೇರಳ ಫೆಡರೇಶನ್ ಆಫ್ ಪೆಟ್ರೋಲಿಯಂ ಟ್ರೇಡರ್ಸ್ ನೇತೃತ್ವದಲ್ಲಿ ರವಿವಾರ ಪೆಟ್ರೋಲ್ ಪಂಪ್ಗಳು ಬಂದ್ ನಡೆಸಲಿವೆ ಎಂದು ಟ್ರೇಡರ್ಸಿನ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಿಕ್ಕಟ್ಟು ಎದುರಿಸುತ್ತಿರುವ ಪೆಟ್ರೋಲ್ ಬಂಕ್ ಕ್ಷೇತ್ರಕ್ಕೆ ಸರಕಾರ ಕೂಡಲೇ ನೆರವು ನೀಡಬೇಕೆಂದು ಸಂಘಟನೆ ಆಗ್ರಹಿಸಿದೆ.
ಸರಕಾರ ತಳೆದಿರುವ ಪೆಟ್ರೋಲ್ ಬಂಕ್ ಮಾಲಕರ ವಿರೋಧಿ ನಿಲುವನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಿರುವ ಪ್ರಯುಕ್ತ ಇಂದು ಕೇರಳದಲ್ಲಿ ಪೆಟ್ರೋಲ್ ಬಂಕ್ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಎಂ.ರಾಧಾಕೃಷ್ಣನ್, ಕೆ.ಎಸ್.ಕೊಮು ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.