ಮುಂದಿನ ವರ್ಷ ಅಯೋಧ್ಯೆಯಲ್ಲಿ ರಾಮಮಂದಿರ: ಸುಬ್ರಮಣಿಯನ್ ಸ್ವಾಮಿ

Update: 2017-05-14 16:54 GMT

ಡೆಹ್ರಾಡೂನ್,ಮೇ 14: ಮುಂದಿನ ವರ್ಷದ ವೇಳೆಗೆ ಅಯೋಧ್ಯೆಯಲ್ಲಿ ರಾಮಮಂದಿರವು ನಿರ್ಮಾಣಗೊಳ್ಳಲಿದೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ರವಿವಾರ ಇಲ್ಲಿ ಹೇಳಿದರು.

ಸಂಘಪರಿವಾರದ ಅಂಗಸಂಸ್ಥೆ ವಿಶ್ವ ಸಂವಾದ ಕೇಂದ್ರವು ಏರ್ಪಡಿಸಿದ್ದ ನಾರದ ಸನ್ಮಾನ ಸಮಾರೋಹ್‌ನಲ್ಲಿ ಮಾತನಾಡುತ್ತಿದ್ದ ಅವರು, ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿರುವ ರಾಮ ಮಂದಿರ-ಬಾಬರಿ ಮಸೀದಿ ಪ್ರಕರಣದ ವಿಚಾರಣೆಯು ಈ ವರ್ಷದ ನವಂಬರ್‌ನಲ್ಲಿ ಮುಗಿಯಲಿದೆ ಮತ್ತು ಮಂದಿರ ನಿರ್ಮಾಣ ಮಾರ್ಗವನ್ನು ಸುಗಮಗೊಳಿಸಲಿದೆ ಎಂದರು.

ರಾಮಮಂದಿರವನ್ನು 2024ರಲ್ಲಿ ನಿರ್ಮಿಸಲಾಗುವುದು ಎಂದು ಸ್ವಾಮಿ ಈ ವರ್ಷದ ಮಾರ್ಚ್‌ನಲ್ಲಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News