ಮೇ 21ರಂದು ಆಶ್ರಯ ವಿದ್ಯಾರ್ಥಿಧಾಮ ಲೋಕಾರ್ಪಣೆ

Update: 2017-05-18 18:53 GMT

ಮಂಗಳೂರು, ಮೇ 18: ನಗರದ ಬಿ.ಹರಿಶ್ಚಂದ್ರ ಆಚಾರ್ಯ ಮೆಮೋರಿಯಲ್ ಟ್ರಸ್ಟ್ ವತಿಯಿಂದ ವಿಶ್ವಕರ್ಮ ಸಮಾಜದ ಅರ್ಹ ಬಡ ವಿದ್ಯಾರ್ಥಿಗಳಿಗೆ ಆಶ್ರಯ ವಿದ್ಯಾರ್ಥಿಧಾಮದ ಮೊದಲ ಹಂತದ ಕಾಮಗಾರಿಯ ಲೋಕಾರ್ಪಣೆ ಕಾರ್ಯಕ್ರಮವು ಮೇ 21ರಂದು ಸಂಜೆ 3:30ಕ್ಕೆ ನಡೆಯಲಿದೆ ಎಂದು ಟ್ರಸ್ಟ್‌ನ ಸದಸ್ಯ ಬೈಕಾಡಿ ಜನಾರ್ದನ ಆಚಾರ್ ಹೇಳಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಈ ವಿದ್ಯಾರ್ಥಿಧಾಮ ಕಟ್ಟಡದ ಮೊದಲ ಹಂತದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಮುಂಬೈನ ಖ್ಯಾತ ಸ್ವರ್ಣೋದ್ಯಮಿ ಶ್ರೀಧರ್ ವಿ.ಆಚಾರ್ಯ ಕಟ್ಟಡದ ಲೋಕಾರ್ಪಣೆ ಮಾಡಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿ.ಹರಿಶ್ಚಂದ್ರ ಆಚಾರ್ಯ ಮೆಮೋರಿಯಲ್ ಟ್ರಸ್ಟ್‌ನ ಅಧ್ಯಕ್ಷ ಕೇಶವ ಬಿ.ಎಚ್. ಬೆಂಗಳೂರು, ಉಪಾಧ್ಯಕ್ಷ ಪಿ.ಶಿವರಾಮ ಆಚಾರ್ ಕಂಕನಾಡಿ, ಪ್ರಧಾನ ಕಾರ್ಯದರ್ಶಿ ಡಾ.ಎಸ್.ಪಿ. ಗುರುದಾಸ್ ಮಂಗಳೂರು, ಕೋಶಾಧಿಕಾರಿ ಬಿ.ಎಚ್.ಯೋಗೀಶ್ ಆಚಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News