ಬೀಜದುಂಡೆ ನೆಡುವ ಕಾರ್ಯಕ್ರಮಕ್ಕೆ ಚಾಲನೆ

Update: 2017-06-06 14:10 GMT

ಮಣಿಪಾಲ, ಜೂ.6: 80ನೆ ಬಡಗಬೆಟ್ಟು ಗ್ರಾಮದ ರಾಜೀವ ನಗರ ಆರ್.ಸಿ.ಫ್ರೆಂಡ್ಸ್ ನೇತೃತ್ವದಲ್ಲಿ ಬೀಜದುಂಡೆಗಳನ್ನು ಆರ್.ಸಿ.ಗ್ರೌಂಡ್‌ನ ಸುತ್ತ ಹಾಗೂ ಮಂಚಿಕೆರೆ ವಾಸುಕೀ ನಾಗಯಕ್ಷೀ ನಾಗ ಸನ್ನಿದಾನದ ಬಳಿ ನೆಡಲಾಯಿತು.

80ನೆ ಬಡಗಬೆಟ್ಟು ಗ್ರಾಪಂ ಅಧ್ಯಕ್ಷ ಶಾಂತರಾಮ್ ಶೆಟ್ಟಿ ಬೀಜದುಂಡೆಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಖ್ಯ ಅತಿಥಿಯಾಗಿ ಉಡುಪಿ ಆರ್ಗಾನಿಕ್ ಕ್ಲಬ್ನ ಮಹೇಶ್ ಶೆಣೈ ಕಟಪಾಡಿ ಆಗಮಿಸಿ ಪರಿಸರ ಸಂರಕ್ಷಣೆ, ಸಾವಯವ ಕೃಷಿ ಹಾಗೂ ಮನೆಯ ತಾರಸಿಯ ಮೇಲೆ ಸಾವಯವ ರೀತಿಯಲ್ಲಿ ತರಕಾರಿ ಬೆಳೆಸುವ ಬಗ್ಗೆ ಮಾಹಿತಿ ನೀಡಿದರು.

ಆರ್.ಸಿ.ಫ್ರೆಂಡ್ಸ್‌ನ ಸುನೀಲ್ ಸೇರಿಗಾರ್, ರಾಜ, ಸುಧೀರ್ ನಾಯಕ್, ಸುಧೀರ್ ಪೂಜಾರಿ, ಕಲ್ಫನ್, ಧನಂಜಯ, ಶಿವ ಪ್ರಸಾದ್, ಸಮಿತ್, ಶಶಿ ಕುಮಾರ್, ಅರುಣ್, ಗಂಪೂ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News