​ಮೂಡುಬಿದಿರೆ: ತಿರುಪತಿಗೆ ತೆರಳುತ್ತಿದ್ದ ಬಸ್ ಪಲ್ಟಿ: ಹತ್ತು ಮಂದಿಗೆ ಗಾಯ

Update: 2017-06-08 04:24 GMT

ಮೂಡುಬಿದಿರೆ, ಜೂ.8: ಉಡುಪಿಯಿಂದ ತಿರುಪತಿಗೆ ತೆರಳುತ್ತಿದ್ದ ಟೂರಿಸ್ಟ್ ಬಸ್ಸೊಂದು ಇಲ್ಲಿನ ಬೆಳುವಾಯಿ ಸಮೀಪ   ಕೆಸರುಗದ್ದೆಯಲ್ಲಿ ಉರುಳಿಬಿದ್ದ ಘಟನೆ ಇಂದು ಮುಂಜಾನೆ ನಡೆದಿದೆ.

ಘಟನೆಯಲ್ಲಿ 10 ಪ್ರಯಾಣಿಕರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಉಡುಪಿಯಿಂದ ತಿರುಪತಿಗೆ ಹೊರಟಿದ್ದ ಈ ಟೂರಿಸ್ಟ್ ಬಸ್ಸಿನಲ್ಲಿ 32 ಪ್ರಯಾಣಿಕರಿದ್ದರು. ಬಸ್ ಬೆಳುವಾಯಿ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿಬಿದ್ದಿದೆ. ಇದರಿಂದ 10 ಪ್ರಯಾಣಿಕರು ಗಾಯಗೊಂಡಿರುವುದಾಗಿ ವರದಿಯಾಗಿದೆ.

ಅಪಘಾತದಿಂದ ಬೆಳುವಾಯಿ-ಆಲಂಗಾರು ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News